ಬೆನಕಟ್ಟಿ (ಬೆಳಗಾವಿ ಜಿಲ್ಲೆ): ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಮಬನೂರ, ಮದ್ಲೂರ ಹಾಗೂ ಬೆನಕಟ್ಟಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಳಗದವರು ಇಲ್ಲಿನ ರಾಜ್ಯ ಹೆದ್ದಾರಿ ಬಂದ್ ಮಾಡಿ ಗುರುವಾರ ಪ್ರತಿಭಟಿಸಿದರು.
ಬಿಜೆಪಿ ಮುಖಂಡ ಅಡಿವೆಪ್ಪ ಶಿರಸಂಗಿ, ‘ಸತತ ಮೂರು ಬಾರಿ ಗೆದ್ದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ಪ್ರಯತ್ನದಿಂದ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಆಡಳಿತವಿದೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿ ಮತ್ತಷ್ಟು ಅಭಿವೃದ್ಧಿಪಡಿಸಲು ಶಕ್ತಿ ತುಂಬಬೇಕು’ ಎಂದರು.
ಮಬನೂರದ ಮುಖಂಡ ಮಹಾದೇವ ಮುರಗೋಡ, ಅಶೋಕ ಬಡಿಗೇರ ಮಾತನಾಡಿದರು. ಬಿಜೆಪಿ ಮುಖಂಡ ಪುಂಡಲೀಕ ಮೇಟಿ, ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಅಜಯ ಕುಸಲಿ, ಬೀರಪ್ಪ ಕುರಿ, ಪಂಚಪ್ಪ ಮಾತಾರಿ, ಈರಯ್ಯ ಹಿರೇಮಠ, ಪ್ರಕಾಶ ಸಾವಳಗಿ, ಅಶೋಕ ಯರಝರ್ವಿ, ಕಾಡಪ್ಪ ವೀರಶೆಟ್ಟಿ, ಬಾಬು ಪರಾಶಿ, ಬಸವರಾಜ ಸುಣಗಾರ, ಫಕೀರಪ್ಪ ಟಪಾಲ, ಎಂ.ಬಿ. ಕಲಕುಟ್ರಿ, ಮಾಯಪ್ಪ ಚೂರಿ, ಬಸಪ್ಪ ನೇಗಿನಾಳ, ಮತ್ತೆಪ್ಪ ಮೇಟಿ, ನಾಗಪ್ಪ ರೈನಾಪೂರ, ಮರೆಪ್ಪ ಸಾವಳಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.