ಕನಿಷ್ಠ ವೇತನ ಕೊಡಿ:ಕಾರ್ಯದರ್ಶಿ ಗೋದಾವರಿ ರಾಜಾಪುರೆ ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನವನ್ನು ಹೆಚ್ಚಿಸಿ, ಕನಿಷ್ಠ ₹ 18,000 ಗೌರವಧನ ನೀಡಬೇಕು. ನಿವೃತ್ತ ನೌಕರರಿಗೆ ₹ 3,000 ಪಿಂಚಣಿ ಕೊಡಬೇಕು. ನಿಧನರಾದ ನೌಕರರ ಕುಟುಂಬಕ್ಕೆ ಶೀಘ್ರ ಪಿಂಚಣಿ ಒದಗಿಸಬೇಕು. ಅನುಕಂಪದ ಆಧಾರದ ಮೇಲೆ ಕುಟುಂಬಸ್ಥರಿಗೆ ನೌಕರಿ ಕೊಡಬೇಕು. ನೌಕರರು ಇಲಾಖೆಯ ಕೆಲಸಗಳಿಗೆ ಓಡಾಡುವಾಗ ಆಕಸ್ಮಿಕವಾಗಿ ಅಪಘಾತ ಸಂಭವಿಸಿದರೇ, ಚಿಕಿತ್ಸೆಯ ಖರ್ಚನ್ನು ಸರ್ಕಾರವೇ ಭರಿಸಬೇಕು. 5 ವರ್ಷ ಸೇವೆ ಪೂರೈಸಿದ ಮೇಲ್ವಿಚಾರಕಿಯರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.