ಇಚಲಕರಂಜಿಯ ಉದ್ಯಮಿ ಸಂಜಯ ಗೋಧಾ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪ್ರತಿಷ್ಠಾ ಆಚಾರ್ಯ, ಆನಂದ ಉಪಾಧ್ಯ ಮತ್ತು ಸ್ಥಳೀಯ ಪಂಡಿತರು ಅಂತ್ಯಸಂಸ್ಕಾರದ ವಿಧಿ–ವಿಧಾನಗಳನ್ನು ನೆರವೇರಿಸಿದರು. ಮುನಿಯ ಅಂತಿಮ ಯಾತ್ರೆಯಲ್ಲಿ ಅಥಣಿ, ಚಿಕ್ಕೋಡಿ, ನಿಪಾಣಿ, ಜಮಖಂಡಿ, ಸಾಂಗ್ಲಿ, ರಾಯಬಾಗ, ಹುಕ್ಕೇರಿ ಭಾಗದ ನೂರಾರು ಮಂದಿ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.