ಸವದತ್ತಿ ತಾಲ್ಲೂಕಿನ ಜೋಗುಳಬಾವಿ ಸತ್ತೆಮ್ಮದೇವಿ, ರಾಮದುರ್ಗ ತಾಲ್ಲೂಕು ಗೊಡಚಿಯ ವೀರಭದ್ರೇಶ್ವರ, ರಾಯಬಾಗ ತಾಲ್ಲೂಕು ಚಿಂಚಲಿಯ ಮಾಯಕ್ಕದೇವಿ, ಬೆಳಗಾವಿ ತಾಲ್ಲೂಕು ಪಂತ ಬಾಳೇಕುಂದ್ರಿಯ ದತ್ತ ಮಂದಿರ, ಹುಕ್ಕೇರಿ ತಾಲ್ಲೂಕು ಬಡಕುಂದ್ರಿಯ ಹೊಳೆಮ್ಮದೇವಿ, ಕಾಗವಾಡ ತಾಲ್ಲೂಕು ಮಂಗಸೂಳಿಯ ಮಲ್ಲಯ್ಯ, ಅಥಣಿ ತಾಲ್ಲೂಕು ಖಿಳೇಗಾಂವದ ಬಸವೇಶ್ವರ ಹಾಗೂ ಕೊಕಟನೂರ ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯುವುದನ್ನು ಕೂಡ ನಿಷೇಧಿಸಲಾಗಿದೆ.