ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣ ನಿರ್ದೇಶಕರ ವಜಾ ನಿಯಮಬದ್ಧವಲ್ಲ: ನಾಟಕಕಾರ ಡಾ.ಡಿ.ಎಸ್. ಚೌಗಲೆ

Last Updated 17 ಸೆಪ್ಟೆಂಬರ್ 2019, 12:14 IST
ಅಕ್ಷರ ಗಾತ್ರ

ಬೆಳಗಾವಿ: ‘ಎಲ್ಲ ರಂಗಾಯಣಗಳ ನಿರ್ದೇಶಕರನ್ನು ವಜಾಗೊಳಿಸಿರುವುದು ನಿಯಮಬದ್ಧವಾದುದಲ್ಲ. ಮುಖ್ಯಮಂತ್ರಿ ಮಧ್ಯಪ್ರವೇಶಿಸಿ‌ ವಜಾ ಆದೇಶ ಹಿಂಪಡೆಯಬೇಕು’ ಎಂದು ನಾಟಕಕಾರ ಡಾ.ಡಿ.ಎಸ್. ಚೌಗಲೆ ಆಗ್ರಹಿಸಿದ್ದಾರೆ.

‘ರಂಗಾಯಣವು ಸ್ವಾಯತ್ತ ಸಂಸ್ಥೆಯಾಗಿದೆ. ಅದಕ್ಕೆ ಅದರದ್ದೇ ಆದ ಬೈಲಾ (ಉಪವಿಧಿ) ಇದೆ. ಸರ್ಕಾರವು ನೇಮಿಸಿದ ರಂಗ ಸಮಾಜದ ಸದಸ್ಯರು ನಿರ್ದೇಶಕರನ್ನು ಅವರ ಪ್ರತಿಭೆ ಹಿನ್ನೆಲೆಯಲ್ಲಿ ಆರಿಸಿದ ನಂತರ ನೇಮಿಸಲಾಗಿರುತ್ತದೆ. ಆ ನಿರ್ದೇಶಕ ಅಥವಾ ರಂಗಕರ್ಮಿ ಯಾವುದೇ ಪಕ್ಷಕ್ಕೆ ಸಂಬಂಧಿಸಿದವರಲ್ಲ. ಆತ ಒಬ್ಬ ಸಾಂಸ್ಕೃತಿಕ ರಾಯಭಾರಿ. ಜನರ ದನಿಯಾಗಿ ರಂಗಾಭಿವ್ಯಕ್ತಿ ಮಾಡುತ್ತಿರುತ್ತಾನೆ. ಅಂಥವರನ್ನು ಹೀಗೆ ವಜಾಗೊಳಿಸುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ. ಇದನ್ನು ಮರುಪರಿಶೀಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT