ಜತೆಗೆ ಗಾಂಧೀಜಿಯವರ 150ನೇ ಜನ್ಮ ವರ್ಷವನ್ನು ಸ್ಮರಣೀಯವಾಗಿ ಆಚರಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ. ದಂಡಿ ಸತ್ಯಾಗ್ರಹ ಸ್ಮರಣಾರ್ಥ ಸಾಬರಮತಿಯಿಂದ ವಿವಿಧ ನಿಲ್ದಾಣಗಳನ್ನು ಸಂಪರ್ಕಿಸುವಂತೆ ‘ದಂಡಿ ಸತ್ಯಾಗ್ರಹ’ ಮತ್ತು ‘ಸ್ವಚ್ಛತಾ ಎಕ್ಸ್ಪ್ರೆಸ್’ ರೈಲುಗಳ ಸಂಚಾರ ನಡೆಸಲಾಗುವುದು. ಜಲವರ್ಣದ ಗಾಂಧಿ ಚಿತ್ರವನ್ನು ಒಳಗೊಂಡ ಟಿಕೆಟ್ಗಳನ್ನು ಪ್ರಯಾಣಿಕರಿಗೆ ನೀಡಲು ನಿರ್ಧರಿಸಲಾಗಿದೆ. ಈ ಪ್ರಸ್ತಾವಕ್ಕೆ ಸಂಸ್ಕೃತಿ ಸಚಿವಾಲಯದ ಅನುಮತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.