ಸಾಮಾಜಿಕ ಕಾರ್ಯಕರ್ತ ವಿಜಯ ಮೋರೆ ಮಾತನಾಡಿ, ‘ವೈದ್ಯರ ಸಹಕಾರದಿಂದಾಗಿ ವ್ಯಕ್ತಿಯು ರೋಗಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೇ ಆರೋಗ್ಯಕರ ಜೀವನ ಪದ್ಧತಿಯನ್ನು ಅರಿಯಬಹುದು. ಹೀಗಾಗಿ, ಅವರು ಜೀವ ರಕ್ಷಕರಷ್ಟೇ ಅಲ್ಲದೇ ಜೀವನ ಶಿಕ್ಷಣದಾತರೂ ಆಗಿದ್ದಾರೆ. ಕಾಲಕಾಲಕ್ಕೆ ಅವರ ಸಲಹೆ ಪಡೆಯುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಎಲ್ಲರೂ ಆರೋಗ್ಯವಾಗಿದ್ದರೆ ಸಮಾಜದಲ್ಲಿ ಅಭಿವೃದ್ಧಿಯು ತ್ವರಿತಗತಿಯಲ್ಲಿ ಆಗುತ್ತದೆ. ಹೀಗಾಗಿ, ಮುಂಜಾಗ್ರತೆ ವಹಿಸಬೇಕು’ ಎಂದು ಸಲಹೆ ನೀಡಿದರು.