‘ನನಗೆ ಎಲ್ಲ ಭಾಷೆಗಳ ಬಗ್ಗೆ ಕುತೂಹಲವಿದೆ. ಹಾಗಾಗಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಸಾಹಿತ್ಯ ರಚಿಸುತ್ತಿದ್ದೇನೆ. ನಾಲ್ಕು ಕವಿತೆ ರಚಿಸಿದ ನಂತರ ಪ್ರಚಾರ ಸಿಗುತ್ತಿದ್ದಂತೆ, ನಾವು ದೊಡ್ಡವರಾದೆವು ಎಂದು ಯುವಪೀಳಿಗೆ ಬೀಗಬಾರದು. ಬದಲಿಗೆ ಸತತ ಪ್ರಯತ್ನಶೀಲವಾಗಿರಬೇಕು. ಬರವಣಿಗೆಯ ಶ್ರೇಷ್ಠತೆ ಉಳಿಸಿಕೊಳ್ಳಬೇಕು. ಅನುಭವಗಳಿಗೆ ಮುಕ್ತ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.