ಬೆಳಗಾವಿ: ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರಿಗೆ ನೆರವಾಗಲು ಇಲ್ಲಿನ ಶ್ರೀರಾಮಕೃಷ್ಣ ಮಿಷನ್ ಆಶ್ರಮ ಮುಂದಾಗಿದೆ.
ಮಿಷನ್ನ ‘ಬರ ಪರಿಹಾರ ಕಾರ್ಯಕ್ರಮ’ದಲ್ಲಿ ಮೊದಲ ಹಂತದಲ್ಲಿ ಅಥಣಿ ತಾಲ್ಲೂಕಿನ ಸಂಬರಗಿ, ಜಂಬಗಿ, ಶಿರೂರ, ಅಜೂರ, ಅನಂತಪುರ ಹಾಗೂ ಪಡೇಗಾಂವ ಗ್ರಾಮಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗಿದೆ. ಮತ್ತಷ್ಟು ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಸಿ ಅಲ್ಲಿನ ಜನರಿಗೆ ಸ್ಪಂದಿಸಲು ಆಶ್ರಮ ಉದ್ದೇಶಿಸಿದೆ.