ವಿಪರೀತ ಮದ್ಯಪಾನ ಮಾಡಿದ್ದ ವಿಠ್ಠಲ ಗುರುವಾರ ಸಂಜೆ ಆಸ್ಪತ್ರೆಗೆ ಬಂದಿದ್ದರು. ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕೊಡಲಿಯನ್ನು ಅತ್ತಂದಿತ್ತ ಬೀಸುತ್ತಿದ್ದರು. ಇದನ್ನು ನೋಡಿದ ಸಿಬ್ಬಂದಿ, ಭಯದಿಂದ ಆಸ್ಪತ್ರೆಯ ಬಾಗಿಲು ಹಾಕಿಕೊಂಡಿದ್ದರು. ಇದರಿಂದ ರೊಚ್ಚಿಗೆದ್ದ ವಿಠ್ಠಲ, ತಾನು ಬರುವುದನ್ನು ನೋಡಿ ಬಾಗಿಲು ಹಾಕಿಕೊಂಡಿದ್ದಾರೆ ಎಂದು ಅರ್ಥೈಸಿಕೊಂಡು ಕೊಡಲಿಯಿಂದ ಬಾಗಿಲಿಗೆ ಹೊಡೆದಿದ್ದಾರೆ. ಕಿಟಕಿಗಳ ಗಾಜು ಒಡೆದುಹಾಕಿದ್ದಾರೆ.