‘ಆಟೊರಿಕ್ಷಾಗಳನ್ನು ಓಡಿಸುತ್ತಾ ಬಡತನದಲ್ಲೇ ಜೀವನ ನಡೆಸುತ್ತಿರುವವರಿಗೆ ಸರ್ಕಾರದಿಂದ ಮನೆ ನಿರ್ಮಿಸಿಕೊಡಬೇಕು. ಆಟೊ ಚಾಲಕರಿಗೆ ಪಿಂಚಣಿ, ಇಎಸ್ಐ ಕಾರ್ಡ್ ನೀಡಬೇಕು. ನೆರೆಯಿಂದ ಸಂತ್ರಸ್ತರಾದವರಿಗೆ ನಿರ್ಮಿಸಿರುವ ಕಾಲೊನಿಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸಬೇಕು. ಕುಡಚಿಯಲ್ಲಿ ತಾಲ್ಲೂಕು ಕೇಂದ್ರವೆಂದು ಘೋಷಿಸಬೇಕು’ ಎಂದು ಆಗ್ರಹಿಸಿದರು.