ಬೆಳಗಾವಿ: ಇಲ್ಲಿನ ಪತ್ರಕರ್ತರು ಹಾಗೂ ಬರಹಗಾರರ ಸಹಕಾರ ಸಂಘದ ಪದಾಧಿಕಾರಿಗಳನ್ನು ಶನಿವಾರ ನಡೆದ ಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕಣಬುರ್ಗಿಯ ಎ.ಎಸ್. ವೀರಗೌಡರ, ಉಪಾಧ್ಯಕ್ಷರಾಗಿ ನಿವೃತ್ತ ಮುಖ್ಯಶಿಕ್ಷಕ ಶರಣಗೌಡ ಪಾಟೀಲ, ಎಂಡಿಯಾಗಿ ಹಸಿರು ಕ್ರಾಂತಿ ದಿನಪತ್ರಿಕೆಯ ಸಂಪಾದಕ ಸಂಪತ್ ಕುಮಾರ್ ಮುಚಳಂಬಿ ಆಯ್ಕೆಯಾದರು.
ಆಡಳಿತ ಮಂಡಳಿ ಸದಸ್ಯರಾದ ಜಲತ್ಕುಮಾರ ಪುಣಜಗೌಡ, ಸ.ರಾ. ಸುಳಕೂಡೆ, ಬಸವರಾಜ ಗಾರ್ಗಿ, ಮಹಾಂತೇಶ ಮೆಣಸಿನಕಾಯಿ, ಎಸ್.ಎಸ್. ರತ್ತು, ಸಿ.ಎಂ. ಬೂದಿಹಾಳ, ಬಸವರಾಜ ಸುಣಗಾರ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ, ರೈತ ಹೋರಾಟಗಾರ ಕಲ್ಯಾಣರಾವ್ ಮುಚಳಂಬಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.