ಶಿವಬಸವನಗರದ ಎನ್.ಆರ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಲಿಂ.ಶಿವಬಸವ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗುರುಗಳಿಗೆ ನಾಗನೂರು ರುದ್ರಾಕ್ಷಿಮಠ ಹಾಗೂ ಲಿಂ.ಶಿವಬಸವ ಸ್ವಾಮೀಜಿ ಬಗ್ಗೆ ಅಪಾರ ಗೌರವವಿತ್ತು. ಬಹಳಷ್ಟು ವಿಷಯಗಳನ್ನು ತಿಳಿಸಿ ಹೆಮ್ಮೆ ಪಡುತ್ತಿದ್ದರು. ನನ್ನನ್ನು ಅತ್ಯಂತ ಅಂತಃಕರಣದಿಂದ ಕಂಡರು’ ಎಂದು ಸ್ಮರಿಸಿದರು.