ಎಂದೂ, ಎಲ್ಲಿಯೂ ಕಾಣದವರು ಇವರು: ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಅನೇಕ ಮಹನೀಯರ ಇತಿಹಾಸ ಇವತ್ತಿನ ಪೀಳಿಗೆಗೆ ಪರಿಚಯವಿಲ್ಲ. ಅದನ್ನು ಪರಿಚಯಿಸುವ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರ ಶಾಸಕ ಅಭಯ ಪಾಟೀಲ ಅವರು ಸಂಗ್ರಹಿಸಿದ 75 ಕ್ರಾಂತಿಕಾರಿಗಳ ಭಾವಚಿತ್ರ ಹಾಗೂ ಮಾಹಿತಿ ಫಲಕಗಳ ಪ್ರದರ್ಶನ ಇದಾಗಿದೆ. ಸದ್ಯ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಗಿದ್ದು, ಭಾನುವಾರದಿಂದ ಎಲ್ಲ ಕ್ರಾಂತಿಕಾರಿಗಳ ಮಾಹಿತಿ ಇಲ್ಲಿ ಸಿಗಲಿದೆ.