‘ನದಿಯಲ್ಲಿ ಪ್ರವಾಹ ಬರುತ್ತಿದ್ದಂತೆ ಗ್ರಾಮದ ಎಲ್ಲರೂ ಮನೆಯ ಸಾಮಗ್ರಿಗಳನ್ನು ಹೊತ್ತು ಸಾಗಿಸುತ್ತಿದ್ದೆವು. ಮೂರು ನಾಲ್ಕು ಸಾರಿ ನಮ್ಮ ವಾಹನ ಸಾಮಗ್ರಿ ಸಾಗಿಸಿ ಮರಳುತ್ತಿದ್ದಂತೆಯೇ ಒಮ್ಮೆಲೆ ನೀರು ಗ್ರಾಮವನ್ನು ಆವರಿಸಿತು. 23 ಜನ ಗೌಡರ ಮೂರಂತಸ್ತಿನ ಕಟ್ಟಡದಲ್ಲಿ ಸಿಲುಕಿಕೊಂಡೆವು. ಮೊದಲನೇ ಅಂತಸ್ತಿನಲ್ಲಿ ನೀರು ಹಂತಹಂತವಾಗಿ ಏರುತ್ತಲೇ ಇತ್ತು. ನಾವಿದ್ದ ಅಂತಸ್ತಿಗೆ ನೀರು ಬರಲಾರಂಭಿಸಿದಾಗ ತುಂಬಾ ಭಯ ಉಂಟಾಯಿತು. ಅಷ್ಟೊತ್ತಿಗೆ ಹೆಲಿಕಾಪ್ಟರ್ನಲ್ಲಿ ಬಂದ ಯೋಧರು ನಮ್ಮೆಲ್ಲರನ್ನೂ ರಕ್ಷಣೆ ಮಾಡಿದರು’ ಎಂದು ವಿವರಿಸಿದರು.