‘ಕೆಲ ದಿನಗಳಿಂದ ತಾಲ್ಲೂಕಿನ ಬೀಡಿ ಗ್ರಾಮದಲ್ಲಿ ತಂಗಿದ್ದ ಅವರು, ಹಗಲಲ್ಲಿ ಅರಣ್ಯ ಪ್ರದೇಶ ಮತ್ತು ಅರಣ್ಯದಂಚಿನ ಕೃಷಿ ಜಮೀನುಗಳಿಗೆ ತೆರಳಿ ಕಾಡು ಹಂದಿಗಳ ಚಲನವಲನದ ಮಾಹಿತಿ ಸಂಗ್ರಹಿಸುತ್ತಿದ್ದರು. ರಾತ್ರಿ ಅಲ್ಲಿಗೆ ತೆರಳಿ ಜಿಲೆಟಿನ್ ಬಾಂಬ್ಗಳನ್ನು ಹುದುಗಿಸಿಡುತ್ತಿದ್ದರು. ಮಂಗಳವಾರ ರಾತ್ರಿ ಬಿಜಗರ್ಣಿ, ಮಾಚಿಗಡ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹಂದಿಗಳ ಬೇಟೆಗಾಗಿ ಬಾಂಬ್ ಹುದುಗಿಸಿಟ್ಟಿದ್ದರು. ಬುಧವಾರ ಆ ಸ್ಥಳಕ್ಕೆ ತೆರಳಿದ್ದ ಅವರು, ಬೇಟೆ ಸಿಗದಿದ್ದರಿಂದ ಹುದುಗಿಸಿಟ್ಟಿದ್ದ ಬಾಂಬ್ಗಳನ್ನು ತೆಗೆದುಕೊಂಡು ವಾಪಸಾಗುತ್ತಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ಗೆ ದ್ವಿಚಕ್ರವಾಹನ ಡಿಕ್ಕಿಯಾಗಿದೆ. ಆಗ, ಬಾಂಬ್ ಇದ್ದ ಚೀಲ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿದ್ದರಿಂದ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.