‘ಹೋದ ವರ್ಷ ನೆರೆಯಿಂದಾಗಿ ಬೆಳೆ ಹಾನಿ ಆಗಿತ್ತು. ಈ ವರ್ಷ ಕೋವಿಡ್–19 ಲಾಕ್ಡೌನ್ನಿಂದ ತರಕಾರಿಗಳನ್ನು ಸಮರ್ಪಕವಾಗಿ ಮಾರಲು ಆಗಲಿಲ್ಲ. ಬೆಲೆ ಕುಸಿತದಿಂದ ಆದಾಯ ಬರಲಿಲ್ಲ. ಹೀಗಾಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಕಾಕತಿ ಠಾಣೆ ಪೊಲೀಸರು ತಿಳಿಸಿದರು.