‘ಆರು ತಿಂಗಳಿಂದಲೂ ಅಲೆಯುತ್ತಿದ್ದೇವೆ. ಆದರೆ, ಹಣ ಸಂದಾಯವಾಗಿಲ್ಲ. ಅಲ್ಲಿಂದ ಇಲ್ಲಿಗೆ ಬರಬೇಕಾದರೆ ಎಷ್ಟು ಖರ್ಚಾಗುತ್ತದೆ, ಎಷ್ಟು ತೊಂದರೆಯಾಗುತ್ತದೆ ನೀವೇ ಹೇಳಿ? ಚೆಕ್ ಕೊಟ್ಟಿದ್ದರೂ ಖಾತೆಯಲ್ಲಿ ಹಣವಿಲ್ಲದೇ ಇದ್ದಿದ್ದರಿಂದ ಬೌನ್ಸ್ ಆಗಿದೆ. ಕಬ್ಬು ಕೊಟ್ಟಿದ್ದೇ ತಪ್ಪಾಯ್ತಾ? ಇದ್ಯಾವ ನ್ಯಾಯ ಹೇಳಿ’ ಎಂದು ಪ್ರಶ್ನಿಸಿರುವುದು ವಿಡಿಯೊದಲ್ಲಿದೆ. ‘ಒಂದಿಲ್ಲೊಂದು ದಿನಾಂಕ ಹೇಳಿ ಅಲೆದಾಡಿಸಲಾಗುತ್ತಿದೆ. ಎಷ್ಟೆಂದು ತ್ರಾಸು ಅನುಭವಿಸುವುದು?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.