ಇಲ್ಲಿನ ಸರ್ಕಾರಿ ಅತಿಥಿಗೃಹದಿಂದ ತೆರಳುತ್ತಿದ್ದ ಮುಖ್ಯಮಂತ್ರಿ ವಿರುದ್ಧ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಮುಖಂಡರು ಘೋಷಣೆ ಕೂಗಿದರು. ಬಿಜೆಪಿಯ 25 ಸಂಸದರು ಸತ್ತು ಹೋಗಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿ ಕಾರ್ನಿಂದ ಇಳಿದು ತಮ್ಮಿಂದ ಮನವಿ ಸ್ವೀಕರಿಸಲಿಲ್ಲ, ಅಹವಾಲು ಆಲಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಮಲಗಿ ಪ್ರತಿಭಟನೆಗೆ ಮುಂದಾದ ರೈತ ಮಹಿಳೆ ಜಯಶ್ರೀ ಗುರಣ್ಣವರ ಮೊದಲಾದವರನ್ನು ಪೊಲೀಸರು ಎಳೆದಾಡಿದರು. ಬಲವಂತವಾಗಿ ಎತ್ತಿಕೊಂಡು ಬಂದು ರಸ್ತೆ ಬದಿಗೆ ತಂದು ಬಿಟ್ಟರು.