ಕೊತ್ವಾಲ ಗಲ್ಲಿಯ ನಿವಾಸಿ ಸೋಮನಾಥ ಲಕ್ಷ್ಮಣ ಶಿರೂರ ಬಂಧಿತ ಆರೋಪಿ. ತಂದೆ ಲಕ್ಷ್ಮಣ ಲಕ್ಕಪ್ಪ ಶಿರೂರ ಅವರನ್ನು ಕೊಂದ ಆರೋಪ ಅವರ ಮೇಲಿದೆ. ‘ಅವರು ಹಣ ಕೊಡು, ಆಸ್ತಿಯಲ್ಲಿ ಪಾಲು ಕೊಡು ಎಂದು ಆಗಾಗ ಒತ್ತಾಯಿಸುತ್ತಿದ್ದರು. ಇದೇ ವಿಚಾರವಾಗಿ ಮಾರ್ಚ್ 4ರಂದು ಸಂಜೆ 4.30ರ ಸಮಯದಲ್ಲಿ ತಂದೆಯ ಎದೆಯ ಕೆಳ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಬಗ್ಗೆ ದೂರು ದಾಖಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.