‘ಶನಿವಾರ ರಾತ್ರಿ ರವಿ ಅವರು ತಮ್ಮ ಮನೆಗೆ ಕಾರಿನಲ್ಲಿ ಮರಳುತ್ತಿದ್ದರು. ಅವರೊಂದಿಗೆ ಚಾಲಕ ಹಾಗೂ ಹಿಂಬದಿ ಸೀಟಿನಲ್ಲಿ ಇನ್ನೂ ಇಬ್ಬರು ಇದ್ದರು. ಆದರೆ, ರವಿ ಅವರ ಮೇಲೆ ಮಾತ್ರ ಒಂದು ಸುತ್ತಿನ ಗುಂಡು ಹಾರಿಸಲಾಗಿದೆ. ಅವರ ಗದ್ದಕ್ಕೆ ಯಾಗಿದ ಗುಂಡು, ಪಕ್ಕದ ಚಾಲಕನ ಕೈಗೆ ಸಿಕ್ಕಿಕೊಂಡಿದೆ. ಹೀಗಾಗಿ, ಈ ದಾಳಿ ರವಿ ಅವರನ್ನೇ ಗುರಿಯಾಗಿಸಿ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ದಾಳಿಕೋರರು ಬೈಕ್ ಮೇಲೆ ಬಂದಿದ್ದರು ಎಂಬ ಮಾಹಿತಿ ಮಾತ್ರ ಗಾಯಗೊಂಡವರಿಗೆ ಗೊತ್ತಾಗಿದೆ. ಅವರು ಯಾರು ಎಂದು ಗುರುತಿಸಲು ಅಥವಾ ಅನುಮಾನಿಸಲು ಆಗಿಲ್ಲ. ತನಿಖೆ ನಡೆಸಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದೂ ಅವರು ಹೇಳಿದರು.