ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಮಕನಮರಡಿಯಲ್ಲಿ ಮೊದಲಿಗೆ ಮತದಾನ ಮಾಡಿದ ಶ್ವೇತಾ ಯರಮಳ್ಳಿ ಖುಷಿ ವ್ಯಕ್ತಪಡಿಸಿದರು.
‘ನಮ್ಮನ್ನು ಆಳುವವರನ್ನು ಆಯ್ಕೆ ಮಾಡಿಕೊಳ್ಳುವುದು ಹೆಮ್ಮೆಯ ವಿಷಯ. ಹೀಗಾಗಿ ಖುಷಿಯಾಗಿದೆ. ಮತ ಚಲಾಯಿಸಲು ಯಾವುದೇ ತೊಂದರೆ ಆಗಲಿಲ್ಲ. ಕಾಲೇಜಿನಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದರಿಂದ ಪ್ರಕ್ರಿಯೆ ಗೊತ್ತಾಗಿತ್ತು. ಯುವ ಜನರಿಗೆ ಉದ್ಯೋಗ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಕೇಶ್ವರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ರುಕ್ಸಾನಾ ಶೇಖ್ ಇದೇ ಮೊದಲಿಗೆ ಮತ ಚಲಾಯಿಸಿದರು. ಹೆಮ್ಮೆ ಹಾಗೂ ಖುಷಿಯಾಗಿದೆ ಎಂದು ತಿಳಿಸಿದರು.
ಹುಕ್ಕೇರಿಯಲ್ಲಿ ಗೌತಮಿ ಸೊಲ್ಲಾಪುರೆ ಹಾಗೂ ನವಮಿ ಸೊಲ್ಲಾಪುರೆ ಇದೇ ಮೊದಲಿಗೆ ಮತದಾನ ಮಾಡಿದರು.