ಬೆಳಗಾವಿ: ಇಲ್ಲಿನ ಗಾಂಧಿನಗರದ ಭಾರತ್ ಟಿಂಬರ್ ಡಿಪೊ ಆವರಣದಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಮುಖಂಡ ಜೀತುಬಾಯಿ ಪಟೇಲ್ ಅವರ ನೇತೃತ್ವದಲ್ಲಿ ಬಡವರಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕಿಟ್ಗಳನ್ನು ವಿತರಿಸಿದರು.
ಇದೇ ವೇಳೆ ಡಿಪೊ ವತಿಯಿಂದ ಪಿಎಂ ಕೇರ್ಸ್ ಗೆ ನೀಡಿದ ₹25 ಸಾವಿರ ಚೆಕ್ ಅನ್ನು ಸಚಿವರು ಸ್ವೀಕರಿಸಿದರು.