ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದ ಬಳಿಯಿರುವ ನಿಯಾಜ್ ಹೋಟೆಲ್ ಆವರಣದಲ್ಲಿ 240 ಲೀಟರ್ ರೆಫ್ರಿಜರೇಟರ್ ಇರಿಸಿ, ಅದರಲ್ಲಿ ಅನ್ನ, ಸಾಂಬಾರ, ತಂದೂರಿ ರೋಟಿ, ಚಪಾತಿ, ಬ್ರೆಡ್, ಹಣ್ಣುಗಳನ್ನು ಪ್ಯಾಕ್ ಮಾಡಿ ಇಡಲಾಗುವುದು. ಹೋಟೆಲ್ನಲ್ಲಿ ಹಣ ಕೊಟ್ಟು ಊಟ ಮಾಡಲು ಸಾಧ್ಯವಾಗದ ಬಡವರು, ನಿರ್ಗತಿಕರು ಈ ಆಹಾರವನ್ನು ಸೇವಿಸಬಹುದು ಎಂದು ರೋಟರಿ ಕ್ಲಬ್ನ ಇವೆಂಟ್ ಚೇರ್ಮನ್ ವೀರಧವಲ ಉಪಾಧ್ಯೆ ‘ಪ್ರಜಾವಾಣಿ’ಗೆ ತಿಳಿಸಿದರು.