ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಶಹಾಪುರದ ವಿವಿಧ ಪಾರಂಪರಿಕ ಮಾರ್ಗಗಳಲ್ಲಿ ಸಂಚರಿಸಿದ ಶಾಸಕ, ಅಲ್ಲಿನ ಅಡೆತಡೆಗಳು ಹಾಗೂ ಬಾಕಿ ಉಳಿದ ಕೆಲಸಗಳನ್ನು ಪರಿಶೀಲಿಸಿದರು. ಕೊರೊನಾ ಬಳಿಕ ಎರಡು ವರ್ಷಗಳ ನಂತರ ಅದ್ಧೂರಿಯಾಗಿ ಹಬ್ಬ ನಡೆಯಲಿದೆ. ಈಗಿನಿಂದಲೇ ಎಲ್ಲ ಅಡೆತಡೆಗಳನ್ನು ನಿವಾಸಿಸಬೇಕು, ರಸ್ತೆಗಳಲ್ಲಿನ ತಗ್ಗುಗಳನ್ನು ಮುಚ್ಚಿ, ಫುಟ್ಪಾತ್ ಸರಿಪಡಿಸಬೇಕು. ಮೆರವಣಿಗೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳು ಸೂಚನೆ ನೀಡಿದರು.