ಕೋವಿಡ್–19 ಸೋಂಕು ಹರಡುವ ಭೀತಿಯಿಂದಾಗಿ ಷರತ್ತುಗಳನ್ನು ವಿಧಿಸಿ ಗಣೇಶೋತ್ಸವ ಆಚರಣೆಗೆ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ, ಅಬ್ಬರ ಕಂಡುಬರಲಿಲ್ಲವಾದರೂ ಸಂಭ್ರಮಕ್ಕೆ ಅಡ್ಡಿ ಇರಲಿಲ್ಲ. ತುಂತುರು ಮಳೆಯಲ್ಲೂ ಗಣೇಶ ಮೂರ್ತಿಗಳನ್ನು ಕರೆ ತಂದ ಜನರು ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿ, ಪೂಜಿಸುವ ಮೂಲಕ ಕೊರೊನಾ ಆತಂಕವನ್ನು ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಸಿಹಿಯೂಟ ಮಾಡಿ ಮನೆ ಮಂದಿಯೊಂದಿಗೆ ಸಮಯ ಕಳೆದರು.