<p><strong>ಹುಕ್ಕೇರಿ</strong>: ತಾಲ್ಲೂಕಿನ ಕುರಣಿ ಗ್ರಾಮದ ಗಂಗಾದೇವಿ ಮಠದ ಜಾತ್ರೆ ಮತ್ತು ರಥೋತ್ಸವ ನ.5 ರಿಂದ 9ರ ವರೆಗೆ ವಿಜೃಂಭನೆಯಿಂದ ಜರುಗಲಿದೆ.</p>.<p>ನ.5ರಂದು ಪ್ರಾತಃಕಾಲ ಕಾರ್ತಿಕ ವದ್ಯೆ ಗೌರಿ ಹುಣ್ಣಿಮೆಯಂದು ಗಂಗಾದೇವಿ ಗದ್ದುಗೆಗೆ ಅಭಿಷೇಕ, ಮಧ್ಯಾಹ್ನ ಮಹಾಪ್ರಸಾದ ಮತ್ತು ಸಂಜೆ 5ಕ್ಕೆ ರಥದ ಕಳಸಾರೋಹಣ ನಂತರ ವೈದಿಕ ರತ್ನ ಸಿದ್ಧೇಶ್ವರ ಶಾಸ್ತ್ರಿ ನೇತೃತ್ವದಲ್ಲಿ ‘ಗಣಹೋಮ’ ನಡೆಯಲಿದೆ.</p>.<p>ನ.6ರಂದು ಬೆಳಿಗ್ಗೆ ಶಿವಭಜನೆ, 9ಕ್ಕೆ ಸಕಲ ವಾದ್ಯಮೇಳದೊಂದಿಗೆ ಪೂರ್ಣ ಕುಂಭೋತ್ಸವ ಮೂಲಕ ದೇವರನ್ನು ಕರೆತರುವುದು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಉದ್ಘಾಟಿಸುವರು. ನಂತರ ಮಹಾಪ್ರಸಾದವಿದೆ. ಸಂಜೆ 4ಕ್ಕೆ ‘ಟಗರಿನ ಕಾಳಗ’ ಕಾಳಗ ನಡೆಯಲಿದೆ.</p>.<p>ನ.7 ರಂದು ಬೆಳಿಗ್ಗೆ ಶಿವಭಜನೆ ಮತ್ತು 9ಕ್ಕೆ ಕುದುರೆ ಗಾಡಿ ಸ್ಪರ್ಧೆ ಇದೆ. ಮಧ್ಯಾಹ್ನ ಮಹಾಪ್ರಸಾದವಿದೆ. ಸಂಜೆ 4ಕ್ಕೆ ‘ಕುಸ್ತಿ’ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಥಮ ₹15,001, ದ್ವಿತೀಯ ₹11,001 ಮತ್ತು ತೃತೀಯ ₹7,001 ಬಹುಮಾನಗಳಿವೆ. ಅಂದು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ರಾತ್ರಿ 11ಕ್ಕೆ ‘ರಾಧಾಕೃಷ್ಣ’ ಬಯಲಾಟ ನಡೆಯಲಿದೆ.</p>.<p>ನ.8ರಂದು ಬೆಳಿಗ್ಗೆ 9ಕ್ಕೆ ಜೋಡೆತ್ತಿನ ಗಾಡಿ ಸ್ಪರ್ಧೆಯಿದೆ. ವಿಜೇತರಿಗೆ ಪ್ರಥಮ ಬಹುಮಾನ ₹51,001, ದ್ವಿತೀಯ ₹35,001 ಮತ್ತು ತೃತೀಯ ₹25,001 ಬಹುಮಾನಗಳಿವೆ. ಮಧ್ಯಾಹ್ನ ಮಹಾಪ್ರಸಾದವಿದೆ. ಮಧ್ಯಾಹ್ನ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ‘ರಥೋತ್ಸವ’ ಉದ್ಘಾಟಿಸುವರು. ರಾತ್ರಿ 10ಕ್ಕೆ ಕುರಣಿ ಲಕ್ಷ್ಮೀದೇವಿ ನಾಟ್ಯ ಸಂಘದವರಿಂದ ‘ಅತ್ತಿಗೆಗೆ ಬಂದ ಅಗ್ನಿ ಪರೀಕ್ಷೆ’ (ಬೆಂಕಿಯಲ್ಲಿ ಅರಳಿದ ಹೂವು) ಸಾಮಾಜಿಕ ನಾಟಕವಿದೆ.</p>.<p>ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊ.8150984011, ಮೊ.9945859212, ಮೊ.8861073206 ಮತ್ತು 7899962219 ಸಂಪರ್ಕಿಸಬಹುದು. ನ.9ರಂದು ಬೆಳಿಗ್ಗೆ ದೇವಾನುದೇವತೆ ಬೀಳ್ಕೊಡುವ ಮೂಲಕ ಜಾತ್ರೆ ಸಂಪನ್ನಗೊಳ್ಳುವುದು ಎಂದು ಮಠದ ಟ್ರಸ್ಟಿ ಆನಂದ ಸ್ವಾಮಿ ತವಗಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ</strong>: ತಾಲ್ಲೂಕಿನ ಕುರಣಿ ಗ್ರಾಮದ ಗಂಗಾದೇವಿ ಮಠದ ಜಾತ್ರೆ ಮತ್ತು ರಥೋತ್ಸವ ನ.5 ರಿಂದ 9ರ ವರೆಗೆ ವಿಜೃಂಭನೆಯಿಂದ ಜರುಗಲಿದೆ.</p>.<p>ನ.5ರಂದು ಪ್ರಾತಃಕಾಲ ಕಾರ್ತಿಕ ವದ್ಯೆ ಗೌರಿ ಹುಣ್ಣಿಮೆಯಂದು ಗಂಗಾದೇವಿ ಗದ್ದುಗೆಗೆ ಅಭಿಷೇಕ, ಮಧ್ಯಾಹ್ನ ಮಹಾಪ್ರಸಾದ ಮತ್ತು ಸಂಜೆ 5ಕ್ಕೆ ರಥದ ಕಳಸಾರೋಹಣ ನಂತರ ವೈದಿಕ ರತ್ನ ಸಿದ್ಧೇಶ್ವರ ಶಾಸ್ತ್ರಿ ನೇತೃತ್ವದಲ್ಲಿ ‘ಗಣಹೋಮ’ ನಡೆಯಲಿದೆ.</p>.<p>ನ.6ರಂದು ಬೆಳಿಗ್ಗೆ ಶಿವಭಜನೆ, 9ಕ್ಕೆ ಸಕಲ ವಾದ್ಯಮೇಳದೊಂದಿಗೆ ಪೂರ್ಣ ಕುಂಭೋತ್ಸವ ಮೂಲಕ ದೇವರನ್ನು ಕರೆತರುವುದು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಉದ್ಘಾಟಿಸುವರು. ನಂತರ ಮಹಾಪ್ರಸಾದವಿದೆ. ಸಂಜೆ 4ಕ್ಕೆ ‘ಟಗರಿನ ಕಾಳಗ’ ಕಾಳಗ ನಡೆಯಲಿದೆ.</p>.<p>ನ.7 ರಂದು ಬೆಳಿಗ್ಗೆ ಶಿವಭಜನೆ ಮತ್ತು 9ಕ್ಕೆ ಕುದುರೆ ಗಾಡಿ ಸ್ಪರ್ಧೆ ಇದೆ. ಮಧ್ಯಾಹ್ನ ಮಹಾಪ್ರಸಾದವಿದೆ. ಸಂಜೆ 4ಕ್ಕೆ ‘ಕುಸ್ತಿ’ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಥಮ ₹15,001, ದ್ವಿತೀಯ ₹11,001 ಮತ್ತು ತೃತೀಯ ₹7,001 ಬಹುಮಾನಗಳಿವೆ. ಅಂದು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ರಾತ್ರಿ 11ಕ್ಕೆ ‘ರಾಧಾಕೃಷ್ಣ’ ಬಯಲಾಟ ನಡೆಯಲಿದೆ.</p>.<p>ನ.8ರಂದು ಬೆಳಿಗ್ಗೆ 9ಕ್ಕೆ ಜೋಡೆತ್ತಿನ ಗಾಡಿ ಸ್ಪರ್ಧೆಯಿದೆ. ವಿಜೇತರಿಗೆ ಪ್ರಥಮ ಬಹುಮಾನ ₹51,001, ದ್ವಿತೀಯ ₹35,001 ಮತ್ತು ತೃತೀಯ ₹25,001 ಬಹುಮಾನಗಳಿವೆ. ಮಧ್ಯಾಹ್ನ ಮಹಾಪ್ರಸಾದವಿದೆ. ಮಧ್ಯಾಹ್ನ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ‘ರಥೋತ್ಸವ’ ಉದ್ಘಾಟಿಸುವರು. ರಾತ್ರಿ 10ಕ್ಕೆ ಕುರಣಿ ಲಕ್ಷ್ಮೀದೇವಿ ನಾಟ್ಯ ಸಂಘದವರಿಂದ ‘ಅತ್ತಿಗೆಗೆ ಬಂದ ಅಗ್ನಿ ಪರೀಕ್ಷೆ’ (ಬೆಂಕಿಯಲ್ಲಿ ಅರಳಿದ ಹೂವು) ಸಾಮಾಜಿಕ ನಾಟಕವಿದೆ.</p>.<p>ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊ.8150984011, ಮೊ.9945859212, ಮೊ.8861073206 ಮತ್ತು 7899962219 ಸಂಪರ್ಕಿಸಬಹುದು. ನ.9ರಂದು ಬೆಳಿಗ್ಗೆ ದೇವಾನುದೇವತೆ ಬೀಳ್ಕೊಡುವ ಮೂಲಕ ಜಾತ್ರೆ ಸಂಪನ್ನಗೊಳ್ಳುವುದು ಎಂದು ಮಠದ ಟ್ರಸ್ಟಿ ಆನಂದ ಸ್ವಾಮಿ ತವಗಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>