ರಾಯಬಾಗ: ತಾಲ್ಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಹೊಲದಲ್ಲಿ ಬೆಳೆದಿದ್ದ ಹಾಗೂ ಮನೆಯಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು, ವ್ಯಕ್ತಿಯನ್ನು ಬಂಧಿಸಿದ್ದಾರೆ.
ಅದೇ ಗ್ರಾಮದ ಈರಪ್ಪ ಬಸಪ್ಪ ಖನದಾಳೆ ಬಂಧಿತ ಆರೋಪಿ. ಅವರಿಂದ 590 ಗ್ರಾಂ. ಹಸಿ ಗಾಂಜಾ ಹಾಗೂ 740 ಗ್ರಾಂ. ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಬಕಾರಿ ಉಪ ಆಯುಕ್ತ ಕೆ.ಅರುಣಕುಮಾರ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಸೂಪರಿಂಟೆಂಡೆಂಟ್ ಲಗಮಣ್ಣ ಸಲಗರೆ ಅವರ ನೇತೃತ್ವದಲ್ಲಿ ರಾಯಬಾಗ ವಲಯದ ಉಪ ಅಬಕಾರಿ ಇನ್ಸ್ಪೆಕ್ಟರ್ ಜಟ್ಟೆಪ್ಪ ಮುಳಬಾಗಿ, ಪಿಎಸ್ಐ ವಿಜಯಕುಮಾರ ಮೆಳವಂಕಿ, ಹಣಮಂತಪ್ಪ ಪಟಾಯಿತ ಈ ಕಾರ್ಯಾಚರಣೆ ನಡೆಸಿದ್ದಾರೆ.