ನಗರದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತ ಪಂಚಮಸಾಲಿ ಸಮುದಾಯ ಯಾವುದೇ ಜಾತಿ ಕಾಲಂನಲ್ಲಿ ಇರಲಿಲ್ಲ. ಈ ವಿಷಯವನ್ನು 2010ರಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದಾಗ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೆ. ಆಗ, ಅವರು ಉಪಸಮಿತಿ ರಚಿಸಿದ್ದರು. ಅದರಲ್ಲಿ ನಾನೂ ಸದಸ್ಯನಿದ್ದೆ. ಯಡಿಯೂರಪ್ಪ ಅವರು ಪ್ರವರ್ಗ 2ಎ ಮೀಸಲಾತಿಗೆ ರೆಫರ್ ಮಾಡಿದ್ದರು. ಅಧಿವೇಶನದಲ್ಲಿ ಪ್ರಶ್ನೆ ಬಂದರೆ ವಿಳಂಬ ಆಗುತ್ತದೆ ಎಂಬ ಕಾರಣಕ್ಕೆ 3ಬಿಗೆ ಸೇರಿಸಿದರು. ಸಮಾಜವನ್ನು ಪ್ರವರ್ಗ 3ಬಿಗೆ ಸೇರ್ಪಡೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.