ದೌಡ್ನಲ್ಲಿ ಪಾಲ್ಗೊಂಡಿದ್ದ ಯುವಕರು ಮಾರ್ಗಮಧ್ಯದ ದೇವಸ್ಥಾನಗಳಿಗೆ ತೆರಳಿ ಆರತಿ ಬೆಳಗಿ, ಪೂಜೆ ಸಲ್ಲಿಸಿದರು.ಶಾಸ್ತ್ರಿ ನಗರ, ಮಹಾದ್ವಾರ ರಸ್ತೆ, ಗೂಡಶೆಡ್ ರಸ್ತೆ, ಕಪಿಲೇಶ್ವರ ಕಾಲೊನಿ ಮೂಲಕ ದೌಡ್ ಸಂಚರಿಸಿತು. ಕಪಿಲೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಧ್ವಜ ಇಳಿಸುವ ಮೂಲಕ ದೌಡ್ ಮುಕ್ತಾಯಗೊಂಡಿತು.