ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ದೇವರಹಿಪ್ಪರಗಿ ಶಾಸಕ, ಈಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ಎ.ಎಸ್.ಪಾಟೀಲ ನಡಹಳ್ಳಿ ನಿವಾಸದ ಮೇಲೆ ಅಧಿಕಾರಿಗಳು ಮಂಗಳವಾರ ಒಂದೇ ದಿನ ಎರಡು ಬಾರಿ ದಾಳಿ ಮಾಡಿದ್ದಾರೆ.
ಶಾಸಕರು, ಮಹಿಳೆಯರಿಗೆ ಸೀರೆ ಹಂಚುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ತಹಶೀಲ್ದಾರ್ ಎಂ.ಎ.ಎಸ್.ಬಾಗವಾನ ನೇತೃತ್ವದ ತಂಡವು ಪೊಲೀಸರೊಂದಿಗೆ ಮಧ್ಯಾಹ್ನ ದಿಢೀರ್ ದಾಳಿ ನಡೆಸಿತು. ಇದಕ್ಕೆ ನಡಹಳ್ಳಿ ಆಕ್ಷೇಪ ವ್ಯಕ್ತಪಡಿಸಿದರು. ಸಂಜೆ ವೇಳೆ ಮತ್ತೆ ದಾಳಿ ನಡೆಸಿ, ಸೀರೆ–ಕುಪ್ಪಸದ ಬಟ್ಟೆಗಳಿರುವ ಗಂಟು ವಶಪಡಿಸಿಕೊಂಡಿದ್ದಾರೆ.