ಹಳ್ಳೂರಲ್ಲಿ ‘ಕುರುಬರ ಹಸರಬ್ಬ‘ ಸಂಭ್ರಮ

ಹಳ್ಳೂರ: ಗ್ರಾಮ ದೇವತೆ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕುರುಬ ಸಮಾಜದವರ ಆಶ್ರಯದಲ್ಲಿ ‘ಕುರುಬರ ಹಸರಬ್ಬ’ ಜಾತ್ರಾ ಮಹೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು.
ಮಹಾಲಕ್ಷ್ಮಿ ಹಾಗೂ ಏಳೂರು ಸೀಮೆವ್ವತಾಯಿ ಕರ್ತೃ ಗದುಗ್ಗೆಗೆ ವಿಶೇಷ ಪೂಜೆ ಸಲ್ಲಿಸಿ, ಉಡಿ ತುಂಬಿದರು. ನಂತರ ಪಲ್ಲಕ್ಕಿ ಉತ್ಸವ ನಡೆಯಿತು.
ಪಿಕೆಪಿಎಸ್ ಅಧ್ಯಕ್ಷ ಸುರೇಶ ಕತ್ತಿ, ಮುಖಂಡರಾದ ಮಲಕಾರಿ ಗೊಂಗಡಿ, ನವಲಪ್ಪ ಮಗದುಮ್ಮ, ಯಲ್ಲಪ್ಪ ಹುರಕನ್ನವರ, ಲಕ್ಷ್ಮಣ ಮಗದುಮ್ಮ, ಶ್ರೀಕಾಂತ ದುರದುಂಡಿ, ಸತ್ಯಪ್ಪ ಮರಿಚಂಡಿ, ಬಸಪ್ಪ ದುರದುಂಡಿ, ಲಕ್ಕಪ್ಪ ಗೊಂಗಡಿ, ಯಲ್ಲಪ್ಪ ಕದ್ದಿ, ಲಕ್ಕಪ್ಪ ದುರದುಂಡಿ, ಯಲ್ಲಪ್ಪ ಪೂಜೇರಿ, ಲಕ್ಕಪ್ಪ ಪೂಜೇರಿ, ಬೀರಸಿದ್ದೇಶ್ವರ ಸಮಿತಿವರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.