‘ಪೋಲೆಂಡ್ ತಲುಪಿದ ಮೇಲೆ ಭಯ ದೂರವಾಯ್ತು. ಇಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಊಟ, ನೀರಿನ ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿದ್ದರು. ನಿದ್ರೆಯನ್ನೂ ಮಾಡಿದೆವು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮೊಂದಿಗಿದ್ದರು. ಹುಡುಗರು ಮತ್ತು ಹುಡುಗಿಯರ ವಾಸ್ತವ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು ಎಂದು ಮಕ್ಕಳು ತಿಳಿಸಿದ್ದಾರೆ. ತಂದೆ ಲಕ್ಷ್ಮಣ ಛಬ್ಬಿ ಅವರೊಂದಿಗೂ ಶನಿವಾರ ಮಾತನಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಮನೆಗೆ ತಲಪಬಹುದು. ಇದರಿಂದ ನಮ್ಮ ಆತಂಕ ಕಡಿಮೆಯಾಗಿದೆ’ ಎಂದು ಮಾಹಿತಿ ನೀಡಿದರು.