ವಿಶೇಷವೆಂದರೆ ಈ ಜಾಗ ದಾನ ಮಾಡಲು ಅವರ ಪುತ್ರಿ ಕಾಜಲ್ ಕಾರಣ. ಚಿಕ್ಕೋಡಿಯಲ್ಲಿ ಪದವಿ ಓದುತ್ತಿರುವ ಅವರು, ತಮ್ಮ ಮನೆ ಪರಿಸರದಲ್ಲಿ ಮಂಜೂರಾಗಿರುವ ಅಂಗನವಾಡಿ ಕಟ್ಟಡ ಜಾಗದ ಕೊರತೆಯಿಂದ ಬೇರೆಡೆ ಸ್ಥಳಾಂತರವಾಗಬಾರದು. ನಮ್ಮ ಪರಿಸರದ ಮಕ್ಕಳು ಅಂಗನವಾಡಿ ಸೌಲಭ್ಯ ಪಡೆಯಲು ಇಲ್ಲೇ ಕಟ್ಟಡ ನಿರ್ಮಾಣವಾಗಬೇಕು ಎಂದು, ಜಾಗ ಕೊಡಲು ಕುಟುಂಬದವರ ಮನವೊಲಿಸಿದ್ದಾರೆ.