ಬೆಳಗುಂದಿ, ರಕ್ಕಸಕೊಪ್ಪ, ಸೋನೊಲಿ, ಎಳೆಬೈಲ್ ಗ್ರಾಮಗಳಿಗೆ ಭೇಟಿ ಕೊಟ್ಟು ನಿರಾಶ್ರಿತರ ಸಂಕಷ್ಟಗಳಿಗೆ ಸ್ಪಂದಿಸಿದರು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿಯಿಂದ ಬಿ.ಜಿ. ರಘು, ಎಚ್.ಜಿ. ಗಣೇಶ, ಬಿ.ಜಿ. ಮಲ್ಲೇಶಪ್ಪ, ಕರಿಯಪ್ಪ ನೇತೃತ್ವದ 60 ಮಂದಿಯ ತಂಡ ನಿರಾಶ್ರಿತರಿಗೆ ಬಟ್ಟೆ, ಆಹಾರ ಪರಾರ್ಥ ವಿತರಿಸಿದರು. ಅವರಿಗೆ ಶಾಸಕರು ಧನ್ಯವಾದ ಸಲ್ಲಿಸಿದರು.