‘ಬಾಲಕಿಯನ್ನು ರಾಮನಗರದ ನಿವಾಸಿ ಕಿರಣ ಶಾನೂರ ವಿಭೂತಿ (12) ಎಂದು ಗುರುತಿಸಲಾಗಿದೆ. ಚಿಕ್ಕೋಡಿಗೆ ಹೋಗಿ ಬರುತ್ತಿದ್ದ ಮೂವರು ಸಹೋದರಿಯರು ಹಳ್ಳ ದಾಟಿಕೊಂಡು ರಾಮನಗರಕ್ಕೆ ತೆರಳುತ್ತಿದ್ದಾಗ ನೀರಿನ ರಭಸ ಹೆಚ್ಚಾದ್ದರಿಂದ ಕೊಚ್ಚಿಕೊಂಡು ಹೋಗಿದ್ದರು. ಗಮನಿಸಿದ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ. ಕಿರಣ ಕೊಚ್ಚಿ ಹೋಗಿದ್ದಾಳೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.