ಇದರಿಂದ ಸಿದ್ನಾಳ, ಹುನ್ನರಗಿ, ಬೋಳೆವಾಡಿ, ಭೋಜ, ಕಾರದಗಾ ಹೀಗೆ ಅನೇಕ ಗ್ರಾಮದ ಜನರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡಬೇಕಾಗಿದೆ. ಇನ್ನೂ ಮಳೆ ಮುಂದುವರೆದಿದ್ದರಿಂದ ಮುನ್ನೆಚ್ಚರಿಕೆಯಾಗಿ ತಾಲೂಕಾ ಆಡಳಿತ ಬ್ಯಾರೇಜ್ ಹತ್ತಿರ ಬ್ಯಾರಿಕೇಡ್ ಅಳವಡಿಸಿ ಗಡಿ ಹಾಗೂ ನದಿಯ ದಡದಲ್ಲಿರುವ ಗ್ರಾಮಗಳ ಜನರರಿಗೆ ಎಚ್ಚರಿಕೆಯಿಂದ ಇರಲು ತಿಳಿಸಿದ್ದಾರೆ. ಹಲವೆಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಹಶೀಲ್ದಾರ್ ಪ್ರಕಾಶ ಗಾಯಕವಾಡ ತಿಳಿಸಿದ್ದಾರೆ.