ಗೋಕಾಕ: ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ ಅಂಗವಾಗಿ ಭಾನುವಾರ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳ ಪ್ರಶಸ್ತಿ ಪುರಸ್ಕಾರದ ಬಳಿಕ ವಿಜೇತರು ಹೆಲಿಕಾಪ್ಟರ್ನಲ್ಲಿ ಸುತ್ತಿ ವಿಶಿಷ್ಟ ಅನುಭವ ಪಡೆದರು.
ನಗರದ ಮಹರ್ಷಿ ವಾಲ್ಮೀಕಿಕ್ರೀಡಾಂಗಣದಲ್ಲಿ ಮಾವನ ಬಂಧುತ್ವ ವೇದಿಕೆ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗೋಕಾಕ ನಗರ ಸೇರಿದಂತೆ ಸುತ್ತ-ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಸುತ್ತ ವಿಜೇತರಿಗೆ ಪ್ರದಕ್ಷಿಣೆ ಹಾಕಿಸಲಾಯಿತು. ಈ ಕುರಿತು ಮೊದಲೇ ಪ್ರಕಟಿಸಲಾಗಿತ್ತು.
ಬೆಳಗಾವಿ, ಚಾಮರಾಜನಗರ, ತೀರ್ಥಹಳ್ಳಿ, ರಾಯಚೂರು, ಕಲಬುರ್ಗಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ 11 ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾದರು.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಪುರಸ್ಕೃತರನ್ನು ಸತ್ಕರಿಸಿದರು.