ಗೃಹ ಸಚಿವಾಲಯದ ನಿವೃತ್ತ ಸಹಾಯಕ ನಿರ್ದೇಶಕ ಡಾ.ಜೈಶಂಕರ್ ಯಾದವ್ ಮಾತನಾಡಿ, ‘ಅಧಿಕೃತ ಭಾಷೆ ಹಿಂದಿಯನ್ನು ಗರಿಷ್ಠವಾಗಿ ಬಳಸುವುದು ನಮ್ಮ ಸಂವಿಧಾನಿಕ ಜವಾಬ್ದಾರಿ ಮಾತ್ರವಲ್ಲ; ಇದು ನಮ್ಮ ಬ್ಯಾಂಕಿಂಗ್ ವ್ಯವಹಾರದ ಅಗತ್ಯವೂ ಆಗಿದೆ. ಆದ್ದರಿಂದ ಹಿಂದಿಯನ್ನು ತಿಳಿದುಕೊಳ್ಳುವುದು, ಕಲಿಯುವುದು ಮತ್ತು ಕೆಲಸದಲ್ಲಿ ಬಳಸುವುದು ನಮಗೆ ಅಗತ್ಯವಾಗಿದೆ’ ಎಂದು ಹೇಳಿದರು.