<p>ಹುಕ್ಕೇರಿ: ತಾಲ್ಲೂಕಿನ ಹಿಡಕಲ್ ಡ್ಯಾಂ ಬಳಿಯ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಗೆ 2025–26ನೇ ಸಾಲಿಗೆ ಕಬ್ಬು ಪೂರೈಸಿದ ಸದಸ್ಯ ರೈತರಿಗೆ ‘ಪ್ರತಿ ಟನ್ ಕಬ್ಬಿಗೆ ಅರ್ಧ ಕೆಜಿಯಂತೆ’ 50 ಕೆ.ಜಿ ಮಿತಿಗೊಳಪಟ್ಟು ಪ್ರತಿ ಕೆ.ಜಿ ಸಕ್ಕರೆಗೆ ₹ 20ರ ದರದಲ್ಲಿ ಹಾಗೂ ಸದಸ್ಯರಲ್ಲದ ರೈತರಿಗೆ ‘ಪ್ರತಿ ಟನ್ ಕಬ್ಬಿಗೆ ಅರ್ಧ ಕೆಜಿಯಂತೆ’ ₹ 50 ಕೆ.ಜಿ ಮಿತಿಗೊಳಪಟ್ಟು ಪ್ರತಿ ಕೆ.ಜಿ ಸಕ್ಕರೆಗೆ ₹ 25ರ ದರದಲ್ಲಿ ಸಕ್ಕರೆ ವಿತರಣೆ ಮಾಡಲಿದೆ.</p>.<p>ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿ ಬರುವ ಹುಕ್ಕೇರಿ, ಗೋಕಾಕ, ಚಿಕ್ಕೋಡಿ, ಬೆಳಗಾವಿ ತಾಲ್ಲೂಕಿನವರು ಕಾರ್ಖಾನೆಗೆ ₹ 10 ಸಾವಿರ ಷೇರು ಹಣ ತುಂಬಿದ ‘ಅ’ ವರ್ಗದ ಸದಸ್ಯರಿಗೆ 50 ಕೆ.ಜಿ ಸಕ್ಕರೆಯನ್ನು ಮತ್ತು ₹ 5 ಸಾವಿರ ಷೇರು ಹಣ ತುಂಬಿದ ‘ಬ’ವರ್ಗದ ಸದಸ್ಯರಿಗೆ 25 ಕೆ.ಜಿ.ಸಕ್ಕರೆಯನ್ನು ಪ್ರತಿ ಕೆ.ಜಿಗೆ ₹ 20 ದರದಲ್ಲಿ ಏ.10 ರಿಂದ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ್ ತಿಳಿಸಿದ್ದಾರೆ.</p>.<p>ಸದಸ್ಯರು ಮತ್ತು ರೈತರು ನಿಗದಿತ ಅವಧಿದಲ್ಲಿ ಸಕ್ಕರೆ ಪಡೆಯಬೇಕು. ಷೇರು ಬಾಕಿ ಉಳಿಸಿಕೊಂಡವರು ಷೇರು ಹಣ ತುಂಬಿ ಸಕ್ಕರೆ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260409-21-1566467051</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಕ್ಕೇರಿ: ತಾಲ್ಲೂಕಿನ ಹಿಡಕಲ್ ಡ್ಯಾಂ ಬಳಿಯ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಗೆ 2025–26ನೇ ಸಾಲಿಗೆ ಕಬ್ಬು ಪೂರೈಸಿದ ಸದಸ್ಯ ರೈತರಿಗೆ ‘ಪ್ರತಿ ಟನ್ ಕಬ್ಬಿಗೆ ಅರ್ಧ ಕೆಜಿಯಂತೆ’ 50 ಕೆ.ಜಿ ಮಿತಿಗೊಳಪಟ್ಟು ಪ್ರತಿ ಕೆ.ಜಿ ಸಕ್ಕರೆಗೆ ₹ 20ರ ದರದಲ್ಲಿ ಹಾಗೂ ಸದಸ್ಯರಲ್ಲದ ರೈತರಿಗೆ ‘ಪ್ರತಿ ಟನ್ ಕಬ್ಬಿಗೆ ಅರ್ಧ ಕೆಜಿಯಂತೆ’ ₹ 50 ಕೆ.ಜಿ ಮಿತಿಗೊಳಪಟ್ಟು ಪ್ರತಿ ಕೆ.ಜಿ ಸಕ್ಕರೆಗೆ ₹ 25ರ ದರದಲ್ಲಿ ಸಕ್ಕರೆ ವಿತರಣೆ ಮಾಡಲಿದೆ.</p>.<p>ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿ ಬರುವ ಹುಕ್ಕೇರಿ, ಗೋಕಾಕ, ಚಿಕ್ಕೋಡಿ, ಬೆಳಗಾವಿ ತಾಲ್ಲೂಕಿನವರು ಕಾರ್ಖಾನೆಗೆ ₹ 10 ಸಾವಿರ ಷೇರು ಹಣ ತುಂಬಿದ ‘ಅ’ ವರ್ಗದ ಸದಸ್ಯರಿಗೆ 50 ಕೆ.ಜಿ ಸಕ್ಕರೆಯನ್ನು ಮತ್ತು ₹ 5 ಸಾವಿರ ಷೇರು ಹಣ ತುಂಬಿದ ‘ಬ’ವರ್ಗದ ಸದಸ್ಯರಿಗೆ 25 ಕೆ.ಜಿ.ಸಕ್ಕರೆಯನ್ನು ಪ್ರತಿ ಕೆ.ಜಿಗೆ ₹ 20 ದರದಲ್ಲಿ ಏ.10 ರಿಂದ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ್ ತಿಳಿಸಿದ್ದಾರೆ.</p>.<p>ಸದಸ್ಯರು ಮತ್ತು ರೈತರು ನಿಗದಿತ ಅವಧಿದಲ್ಲಿ ಸಕ್ಕರೆ ಪಡೆಯಬೇಕು. ಷೇರು ಬಾಕಿ ಉಳಿಸಿಕೊಂಡವರು ಷೇರು ಹಣ ತುಂಬಿ ಸಕ್ಕರೆ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260409-21-1566467051</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>