ಅನೇಕ ಬಡ ಮಕ್ಕಳಿಗೆ ಅವರು ಉಚಿತವಾಗಿ ಗಾಯನ ತರಬೇತಿ ನೀಡುತ್ತಿದ್ದಾರೆ. 7ನೇ ವರ್ಷದವರಿದ್ದಾಗಲೇ ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾದ ಅವರು ಜೀವನವನ್ನು ಅದಕ್ಕಾಗಿಯೇ ಮೀಸಲಿಟ್ಟವರು. ಪ್ರಾಥಮಿಕ ಸಂಗೀತ ಶಿಕ್ಷಣವನ್ನು ಹಾರ್ಮೋನಿಯಂ ವಾದಕ ಬಾಬುರಾವ ಬೋರಕರ ಅವರಲ್ಲಿ ಪಡೆದರು. ನಂತರ, ಬಿ.ಡಿ. ಜೋಪ್ಯೆ, ಆರ್.ಎನ್. ಜೋಶಿ ಪಾಶ್ಚಾಪೂರಕರ ಅವರ ಮಾರ್ಗದರ್ಶನ ಪಡೆದರು. 1983ರಲ್ಲಿ ಪಂಡಿತ್ ಭೀಮಸೇನ ಜೋಶಿ ಅವರಿಂದಲೂ ಕಲಿತರು. 79 ವರ್ಷದ ಅವರು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಮೊದಲಾದ ರಾಜ್ಯಗಳಲ್ಲಿ ಹಲವು ದೊಡ್ಡ ನಗರಗಳಲ್ಲಿ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಿದ್ದಾರೆ. ಸಂಗೀತ ರಸಿಕರ ಮನ ತಣಿಸಿದ್ದಾರೆ. ಅವರಿಗೆ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಸಂದಿದೆ.