ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬೆನ್ನು ನೋವಿನಿಂದಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗುವುದಕ್ಕೆ ಆಗಲಿಲ್ಲ. ಆಗ ಮುಂಬೈನಲ್ಲಿದ್ದೆ. ವಿಮಾನದ ಟಿಕೆಟ್ ಕೂಡ ತೆಗೆಸಿದ್ದೆ. ಆದರೆ, ನೋವು ಜಾಸ್ತಿಯಾದ್ದರಿಂದ ಅಲ್ಲಿಯೇ ಉಳಿಯಬೇಕಾಯಿತು. ಈ ಕುರಿತು ವರಿಷ್ಠರಿಗೆ ಪತ್ರ ಬರೆದು ತಿಳಿಸಿದ್ದೇನೆ. ಬೆನ್ನು ನೋವಿನಿಂದಾಗಿ, ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲೂ ಹೆಚ್ಚು ದಿನ ಭಾಗವಹಿಸಲು ಆಗಲಿಲ್ಲ’ ಎಂದರು.