<p><strong>ಬೆಳಗಾವಿ</strong>: ರಾಜ್ಯದ ಬೇರೆ ಬೇರೆ ಜಿಲ್ಲೆಗಳು ಹಾಗೂ ಹೊರರಾಜ್ಯಗಳಲ್ಲಿಯೂ ವಾಹನ ಕಳವು ಮಾಡುತ್ತಿದ್ದ ಗ್ಯಾಂಗನ್ನು ಮಾರಿಹಾಳ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಗಳಿಂದ ₹95.50 ಲಕ್ಷ ಮೌಲ್ಯದ 21 ವಾಹನಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಜಿ ಕ್ರಾಸ್ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಮಿನಿ ಗೂಡ್ಸ್ ಟ್ರಕ್ ಕಳ್ಳತನವಾದ ಕುರಿತು ತನಿಖೆಗಿಳಿದಾಗ ಈ ಗ್ಯಾಂಗ್ ಬಲೆಗೆ ಬಿದ್ದಿದೆ.</p>.<p>ಶಿವಮೊಗ್ಗ, ಭದ್ರಾವತಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಮೂವರು ಆರೋಪಿತರು ರಾಜ್ಯದ ವಿವಿಧ ನಗರಗಳಿಗೆ ರಾತ್ರಿ ವೇಳೆ ತೆರಳಿ ಮೊದಲು ವಿವಿಧ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿ, ನಂತರ ಅದೇ ವಾಹನಗಳನ್ನು ಬಳಸಿ ವಿವಿಧ ಸ್ಥಳಗಳಲ್ಲಿ ನಿಲ್ಲಿಸಿದ್ದ ನಾಲ್ಕು ಚಕ್ರದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.</p>.<p>ಕಳ್ಳತನ ಮಾಡಿದ ವಾಹನಗಳನ್ನು ನಂತರ ಯುಸುಫ್ ಖಾನ್ (ಧಾರವಾಡ), ಜಾಕೀರ್ ಹುಸೇನ್ (ಧಾರವಾಡ), ಆಜಾದ್ ಇಬ್ರಾಹಿಂ ಮುತವಲ್ಲಿ (ವಿಜಯಪುರ), ಶಫೀಕ್ ಅಹಮ್ಮದ್ (ವೆಲ್ಲೂರು, ತಮಿಳುನಾಡು) ಹಾಗೂ ಬಸಿರ್ ಹಮ್ಮದ್ ಮಕಾನದಾರ (ದಾಂಡೇಲಿ) ಅವರಿಗೆ ಮಾರಾಟ ಮಾಡಿ ವಿಲೇವಾರಿ ಮಾಡಲಾಗುತ್ತಿತ್ತು.</p>.<p>ವಶಕ್ಕೆ ಪಡೆದ ವಾಹನಗಳು ಮಾರಿಹಾಳ, ತುಮಕೂರು, ನೆಲಮಂಗಲ, ಯಶವಂತಪುರ, ಅರಸಿಕೆರೆ, ದಾವಣಗೆರೆ, ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಶಿರೋಳ ಪ್ರದೇಶಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ್ದು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮಾರಿಹಾಳ ಠಾಣೆಯ ಸಿಪಿಐ ಐ.ಆರ್.ಪಟ್ಟಣಶೆಟ್ಟಿ, ಪಿಎಸ್ಐ ಮಂಜುನಾಥ ಹುಲಕುಂದ, ಪಿಎಸ್ಐ ಚಂದ್ರಶೇಖರ, ಸಿಸಿಬಿ ವಿಭಾಗದ ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<p>ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ತಂಡದ ಕಾರ್ಯ ಪ್ರಶಂಸಿಸಿದ್ದಾರೆ.</p>.<p>ಈ ತಂಡದಲ್ಲಿರುವ ಇನ್ನೂ ಕೆಲ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p><strong>₹3.64 ಲಕ್ಷ ಮೌಲ್ಯದ ಆಭರಣ ವಶ:</strong> ಬಸ್ ಹತ್ತುವ ಸಂದರ್ಭದಲ್ಲಿ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಬಂಗಾರದ ಆಭರಣಗಳನ್ನು ಕಳವು ಮಾಡಿದ ಪ್ರಕರಣ ಭೇದಿಸಿದ ನಗರದ ಕ್ಯಾಂಪ್ ಠಾಣೆ ಪೊಲೀಸರು, ಮಹಿಳೆಯನ್ನು ಬಂಧಿಸಿ ₹3.64 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ನಿಪ್ಪಾಣಿಯ ಬುದ್ಧ ನಗರ ನಿವಾಸಿ ಸವಿತಾ ಸಂಜು ಲೋಂಡೆ (46) ಬಂಧಿತರು. ಬೆಳಗಾವಿಯ ನಿರ್ಮಲಾ ಮಿಲಿಂದ ಸಾವಂತ ಮಾರ್ಚ್ 4ರಂದು ಚಿನ್ನಾಭರಣ ಕಳೆದುಕೊಂಡಿದ್ದರು.</p>.<p>ಖಡೇಬಜಾರ್ ಎಸಿಪಿ ಶೇಖರಪ್ಪ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಆನಂದ ಎಂ. ಒನಕುದ್ರೆ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಲಾಯಿತು. ಪಿಎಸ್ಐಗಳಾದ ಆರ್.ಐ. ಸನದಿ, ಎ.ರುಕ್ಕಿಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ರಾಜ್ಯದ ಬೇರೆ ಬೇರೆ ಜಿಲ್ಲೆಗಳು ಹಾಗೂ ಹೊರರಾಜ್ಯಗಳಲ್ಲಿಯೂ ವಾಹನ ಕಳವು ಮಾಡುತ್ತಿದ್ದ ಗ್ಯಾಂಗನ್ನು ಮಾರಿಹಾಳ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಗಳಿಂದ ₹95.50 ಲಕ್ಷ ಮೌಲ್ಯದ 21 ವಾಹನಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಜಿ ಕ್ರಾಸ್ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಮಿನಿ ಗೂಡ್ಸ್ ಟ್ರಕ್ ಕಳ್ಳತನವಾದ ಕುರಿತು ತನಿಖೆಗಿಳಿದಾಗ ಈ ಗ್ಯಾಂಗ್ ಬಲೆಗೆ ಬಿದ್ದಿದೆ.</p>.<p>ಶಿವಮೊಗ್ಗ, ಭದ್ರಾವತಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಮೂವರು ಆರೋಪಿತರು ರಾಜ್ಯದ ವಿವಿಧ ನಗರಗಳಿಗೆ ರಾತ್ರಿ ವೇಳೆ ತೆರಳಿ ಮೊದಲು ವಿವಿಧ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿ, ನಂತರ ಅದೇ ವಾಹನಗಳನ್ನು ಬಳಸಿ ವಿವಿಧ ಸ್ಥಳಗಳಲ್ಲಿ ನಿಲ್ಲಿಸಿದ್ದ ನಾಲ್ಕು ಚಕ್ರದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.</p>.<p>ಕಳ್ಳತನ ಮಾಡಿದ ವಾಹನಗಳನ್ನು ನಂತರ ಯುಸುಫ್ ಖಾನ್ (ಧಾರವಾಡ), ಜಾಕೀರ್ ಹುಸೇನ್ (ಧಾರವಾಡ), ಆಜಾದ್ ಇಬ್ರಾಹಿಂ ಮುತವಲ್ಲಿ (ವಿಜಯಪುರ), ಶಫೀಕ್ ಅಹಮ್ಮದ್ (ವೆಲ್ಲೂರು, ತಮಿಳುನಾಡು) ಹಾಗೂ ಬಸಿರ್ ಹಮ್ಮದ್ ಮಕಾನದಾರ (ದಾಂಡೇಲಿ) ಅವರಿಗೆ ಮಾರಾಟ ಮಾಡಿ ವಿಲೇವಾರಿ ಮಾಡಲಾಗುತ್ತಿತ್ತು.</p>.<p>ವಶಕ್ಕೆ ಪಡೆದ ವಾಹನಗಳು ಮಾರಿಹಾಳ, ತುಮಕೂರು, ನೆಲಮಂಗಲ, ಯಶವಂತಪುರ, ಅರಸಿಕೆರೆ, ದಾವಣಗೆರೆ, ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಶಿರೋಳ ಪ್ರದೇಶಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ್ದು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮಾರಿಹಾಳ ಠಾಣೆಯ ಸಿಪಿಐ ಐ.ಆರ್.ಪಟ್ಟಣಶೆಟ್ಟಿ, ಪಿಎಸ್ಐ ಮಂಜುನಾಥ ಹುಲಕುಂದ, ಪಿಎಸ್ಐ ಚಂದ್ರಶೇಖರ, ಸಿಸಿಬಿ ವಿಭಾಗದ ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<p>ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ತಂಡದ ಕಾರ್ಯ ಪ್ರಶಂಸಿಸಿದ್ದಾರೆ.</p>.<p>ಈ ತಂಡದಲ್ಲಿರುವ ಇನ್ನೂ ಕೆಲ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p><strong>₹3.64 ಲಕ್ಷ ಮೌಲ್ಯದ ಆಭರಣ ವಶ:</strong> ಬಸ್ ಹತ್ತುವ ಸಂದರ್ಭದಲ್ಲಿ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಬಂಗಾರದ ಆಭರಣಗಳನ್ನು ಕಳವು ಮಾಡಿದ ಪ್ರಕರಣ ಭೇದಿಸಿದ ನಗರದ ಕ್ಯಾಂಪ್ ಠಾಣೆ ಪೊಲೀಸರು, ಮಹಿಳೆಯನ್ನು ಬಂಧಿಸಿ ₹3.64 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ನಿಪ್ಪಾಣಿಯ ಬುದ್ಧ ನಗರ ನಿವಾಸಿ ಸವಿತಾ ಸಂಜು ಲೋಂಡೆ (46) ಬಂಧಿತರು. ಬೆಳಗಾವಿಯ ನಿರ್ಮಲಾ ಮಿಲಿಂದ ಸಾವಂತ ಮಾರ್ಚ್ 4ರಂದು ಚಿನ್ನಾಭರಣ ಕಳೆದುಕೊಂಡಿದ್ದರು.</p>.<p>ಖಡೇಬಜಾರ್ ಎಸಿಪಿ ಶೇಖರಪ್ಪ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಆನಂದ ಎಂ. ಒನಕುದ್ರೆ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಲಾಯಿತು. ಪಿಎಸ್ಐಗಳಾದ ಆರ್.ಐ. ಸನದಿ, ಎ.ರುಕ್ಕಿಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>