ಕಲೆ ಮತ್ತು ಕಲಾವಿದ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ಕಲೆ ಉಳಿಯುವಲ್ಲಿ ಕಲಾವಿದನ ಪಾತ್ರ ಮಹತ್ವವಾಗಿದ್ದು, ಕಲಾವಿದನ ಬೆಳವಣೆಗೆಗೆ ಪೂರಕವಾದ ಪರಿಸರ ನಿರ್ಮಾಣವಾಗಬೇಕು. ಆದಿಮ ಪರಂಪರೆಯಲ್ಲಿ ಸಂದರ್ಭಕ್ಕ ತಕ್ಕಂತೆ ರೂಪುಗೊಂಡ ಕಲೆಗಳಾದ ಡೊಳ್ಳುಕುಣಿತ, ಅರೆವಾದನ, ಕಂಸಾಳೆ, ಪೂಜಾಕುಣಿತ, ವೀರಗಾಸೆ ಮುಂತಾದ ನೂರಾರು ಕಲೆಗಳು ಮಾನವೀಯ ಮೌಲ್ಯಗಳ ಆಗರವಾಗಿದ್ದು, ಮನರಂಜನೆಯ ಜೊತೆಗೆ ಸತ್ವ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.