‘ನಮ್ಮ ಹೋರಾಟದ ಜೊತೆಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿಂದುತ್ವದ ಫೈರ್ ಬ್ರ್ಯಾಂಡ್ ಅಷ್ಟೇ ಅಲ್ಲ; ಲಿಂಗಾಯತ ಪಂಚಮಸಾಲಿ ಸಮಾಜದ ಫೈರ್ ಬ್ರ್ಯಾಂಡ್ ಕೂಡ ಹೌದು. ಅನ್ಯಾಯದ ವಿರುದ್ಧ ದನಿ ಎತ್ತುವ ಸಾಮರ್ಥ್ಯ ಅವರಿಗಿದೆ. ಹುಲಿ ಎಲ್ಲಿದ್ದರೂ ಹುಲಿಯೇ. ಬಹುಸಂಖ್ಯಾತ ಲಿಂಗಾಯತ ಪಂಚಮಸಾಲಿ ಜನಾಂಗದ ಶಕ್ತಿ ವರಿಷ್ಠರಿಗೆ ಗೊತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮಾಜ ರಾಜ್ಯದ ಒಟ್ಟು ಲಿಂಗಾಯತರಲ್ಲಿ ಶೇ.2ರಷ್ಟಿದೆ. ಪಂಚಮಸಾಲಿ ಸಮಾಜದ ಶೇ.80ರಷ್ಟಿದೆ. ಯತ್ನಾಳ ಅವರನ್ನು ಸಣ್ಣ ಪುಟ್ಟ ರಾಜಕಾರಣಿಗಳು ಕಡೆಗಣಿಸಬಹುದು. ಆದರೆ, ಬಿಜೆಪಿಯ ವರಿಷ್ಠರು ಕಡೆಗಣಿಸಲು ಸಾಧ್ಯವೇ ಇಲ್ಲ’ ಎಂದರು.