ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಸಿದ ಮನೆಗಳ ತೆರವಿಗೆ ಜೆಸಿಬಿ ಒದಗಿಸುವೆ: ಸತೀಶ ಜಾರಕಿಹೊಳಿ

Last Updated 14 ಆಗಸ್ಟ್ 2019, 14:50 IST
ಅಕ್ಷರ ಗಾತ್ರ

ಗೋಕಾಕ: ಶಾಸಕ ಸತೀಶ ಜಾರಕಿಹೊಳಿ ಬುಧವಾರ ನಗರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.‌
ಇಲ್ಲಿನವಡ್ಡರ ಗಲ್ಲಿ, ಕುಂಬಾರ ಗಲ್ಲಿ, ಲಕ್ಕಡ ಗಲ್ಲಿ, ಉಪ್ಪಾರ ಗಲ್ಲಿ, ಕಲಾಲ ಗಲ್ಲಿ ಸೇರಿ ವಿವಿಧೆಡೆ ಸಂಚರಿಸಿ ನಗರಸಭೆ ಹಾಗೂ ಸತೀಶ ಶುಗರ್ಸ್‌ ಸಿಬ್ಬಂದಿಕೈಗೊಂಡಿರುವಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದರು. ಸಂತ್ರಸ್ತರಿಗೆ ಒದಗಿಸಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

‌‌‘ಕುಸಿದ ಗೋಡೆ ಹಾಗೂ ಮನೆಗಳ ತೆರವಿಗೆ ಸತೀಶ ಶುಗರ್ಸ್‌ ಕಾರ್ಖಾನೆಯಿಂದ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಒದಗಿಸಲಾಗುವುದು. ಸಂತ್ರಸ್ತರು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಭರವಸೆ ನೀಡಿದರು.

ನಗರಸಭೆ ಸದಸ್ಯ ಭಗವಂತ ಹುಳ್ಳಿ, ಉದ್ಯಮಿ ಲಖನ್‌ ಜಾರಕಿಹೊಳಿ, ಮುಖಂಡರಾದರಿಯಾಜ ಚೌಗಲಾ, ಶಿವು ಪಾಟೀಲ, ವಿವೇಕ ಜತ್ತಿ, ಆರೀಪ ಪೀರಜಾದೆ, ಸದಾನಂದ ಕಲಾಲ, ವಿನಾಯಕ ಚಿಪ್ಪಲಕಟ್ಟಿ, ಅಶೋಕ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT