<p>ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದಿಂದ ಪ್ರತಿ ವರ್ಷದಂತೆ, ಈ ವರ್ಷವೂ ಏ.20ರಂದು ಬಸವ ಜಯಂತಿ ಅಂಗವಾಗಿ ಪಟ್ಟಣದಲ್ಲಿ ನಡೆಯುವ ರಾಮಲಿಂಗೇಶ್ವರ ರಥೋತ್ಸವದಲ್ಲಿ ಅದ್ಧೂರಿಯಾಗಿ ಜೋಡೆತ್ತುಗಳ ಮೆರವಣಿಗೆ ಆಯೋಜಿಸಿದ್ದಾರೆ.</p>.<p>‘ಬಸವ ಜಯಂತಿಯಂದು ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯೊಂದಿಗೆ ಕಳೆದ ಎರಡು ದಶಕಗಳಿಂದ ಬಸವೇಶ್ವರ ಸಹಕಾರ ಸಂಘದಿಂದ ಜೋಡೆತ್ತುಗಳ ಮೆರವಣಿಗೆ ಮಾಡಿಕೊಂಡು ಬಂದಿದ್ದೇವೆ’ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>ಮೆರವಣಿಗೆಯಲ್ಲಿ ಜೋಡೆತ್ತಿಗೆ ಮೇವಿಗಾಗಿ ಹಣ, 2 ಸ್ಟೀಲ್ ಬುಟ್ಟಿ, 1 ಸ್ಟೀಲ್ ಬಕೆಟ್ ಸಂಘದಿಂದ ನೀಡಲಾಗುತ್ತದೆ. ಎತ್ತಿನ ಜೊತೆಗೆ ಬರುವ ರೈತರಿಗೆ 2 ಟೀ ಶರ್ಟ್ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಸಲ 110 ಜೋಡೆತ್ತುಗಳು ಮೆರವಣಿಗೆಯಲ್ಲಿ ಭಾಗವಹಿಸಲು ಸಜ್ಜಾಗಿವೆ.</p>.<p>ಎತ್ತುಗಳ ಕೋಡುಗಳಿಗೆ ಬಣ್ಣದ ರಿಬ್ಬನ್, ಬಣ್ಣದ ಹಗ್ಗಗಳು, ಕೊರಳಿಗೆ ಗೆಜ್ಜೆಗಳ ಸರ, ಕಿರುಗಂಟೆ, ಬೆನ್ನಿನ ಮೇಲೆ ಬಣ್ಣದ ಜೂಲು (ಬಟ್ಟೆ), ಮೈಗೆ ಅಲ್ಲಲ್ಲಿ ಬಣ್ಣದ ಚಿತ್ತಾರ ಹಾಕಿರುವುದರಿಂದ ಮೈಲುದ್ದದವರೆಗೆ ಇರುವ ಜೋಡಿ ಎತ್ತುಗಳ ಸಾಲು ರಸ್ತೆಗೆ ಕಳೆಕಟ್ಟಿರುತ್ತದೆ.</p>.<p>ಕರಡಿ ಮಜಲು, ಹಲಗೆ ಮಜಲು ವಾದ್ಯಗಳ ಗತ್ತಿಗೆ ಹೆಜ್ಜೆ ಹಾಕುತ್ತ ಬರುವ ರೈತನ ಸರದಾರ ಎತ್ತುಗಳನ್ನು ಪಟ್ಟಣದ ಜನರು ರಸ್ತೆಯ ಎರಡೂ ಬದಿಯಲ್ಲಿ ನಿಂತು ಕಣ್ಮುಂಬಿಸಿಕೊಳ್ಳುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-21-1904844514</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದಿಂದ ಪ್ರತಿ ವರ್ಷದಂತೆ, ಈ ವರ್ಷವೂ ಏ.20ರಂದು ಬಸವ ಜಯಂತಿ ಅಂಗವಾಗಿ ಪಟ್ಟಣದಲ್ಲಿ ನಡೆಯುವ ರಾಮಲಿಂಗೇಶ್ವರ ರಥೋತ್ಸವದಲ್ಲಿ ಅದ್ಧೂರಿಯಾಗಿ ಜೋಡೆತ್ತುಗಳ ಮೆರವಣಿಗೆ ಆಯೋಜಿಸಿದ್ದಾರೆ.</p>.<p>‘ಬಸವ ಜಯಂತಿಯಂದು ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯೊಂದಿಗೆ ಕಳೆದ ಎರಡು ದಶಕಗಳಿಂದ ಬಸವೇಶ್ವರ ಸಹಕಾರ ಸಂಘದಿಂದ ಜೋಡೆತ್ತುಗಳ ಮೆರವಣಿಗೆ ಮಾಡಿಕೊಂಡು ಬಂದಿದ್ದೇವೆ’ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>ಮೆರವಣಿಗೆಯಲ್ಲಿ ಜೋಡೆತ್ತಿಗೆ ಮೇವಿಗಾಗಿ ಹಣ, 2 ಸ್ಟೀಲ್ ಬುಟ್ಟಿ, 1 ಸ್ಟೀಲ್ ಬಕೆಟ್ ಸಂಘದಿಂದ ನೀಡಲಾಗುತ್ತದೆ. ಎತ್ತಿನ ಜೊತೆಗೆ ಬರುವ ರೈತರಿಗೆ 2 ಟೀ ಶರ್ಟ್ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಸಲ 110 ಜೋಡೆತ್ತುಗಳು ಮೆರವಣಿಗೆಯಲ್ಲಿ ಭಾಗವಹಿಸಲು ಸಜ್ಜಾಗಿವೆ.</p>.<p>ಎತ್ತುಗಳ ಕೋಡುಗಳಿಗೆ ಬಣ್ಣದ ರಿಬ್ಬನ್, ಬಣ್ಣದ ಹಗ್ಗಗಳು, ಕೊರಳಿಗೆ ಗೆಜ್ಜೆಗಳ ಸರ, ಕಿರುಗಂಟೆ, ಬೆನ್ನಿನ ಮೇಲೆ ಬಣ್ಣದ ಜೂಲು (ಬಟ್ಟೆ), ಮೈಗೆ ಅಲ್ಲಲ್ಲಿ ಬಣ್ಣದ ಚಿತ್ತಾರ ಹಾಕಿರುವುದರಿಂದ ಮೈಲುದ್ದದವರೆಗೆ ಇರುವ ಜೋಡಿ ಎತ್ತುಗಳ ಸಾಲು ರಸ್ತೆಗೆ ಕಳೆಕಟ್ಟಿರುತ್ತದೆ.</p>.<p>ಕರಡಿ ಮಜಲು, ಹಲಗೆ ಮಜಲು ವಾದ್ಯಗಳ ಗತ್ತಿಗೆ ಹೆಜ್ಜೆ ಹಾಕುತ್ತ ಬರುವ ರೈತನ ಸರದಾರ ಎತ್ತುಗಳನ್ನು ಪಟ್ಟಣದ ಜನರು ರಸ್ತೆಯ ಎರಡೂ ಬದಿಯಲ್ಲಿ ನಿಂತು ಕಣ್ಮುಂಬಿಸಿಕೊಳ್ಳುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-21-1904844514</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>