ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರಿಗೆ ನೆರವಾಗದ ಕಿಮ್ಮನೆ: ಮಂಜುನಾಥ ಗೌಡ

Last Updated 2 ಫೆಬ್ರುವರಿ 2018, 7:06 IST
ಅಕ್ಷರ ಗಾತ್ರ

ಶಿವಮೊಗ್ಗ: ಸಜ್ಜನ, ಪ್ರಾಮಾಣಿಕ ಎಂದು ಸ್ವಯಂ ಘೋಷಿಸಿಕೊಂಡು, ಹಿಂಬಾಲಕರ ಮೂಲಕ ಪರೋಕ್ಷವಾಗಿ ಹಣ ಮಾಡುವ ರಾಜಕಾರಣಿಗಳಿಂದ ತಾಲ್ಲೂಕಿನ ಅಭಿವೃದ್ಧಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಜೆಡಿಎಸ್ ಮುಖಂಡ ಆರ್.ಎಂ. ಮಂಜುನಾಥ ಗೌಡ ಶಾಸಕ ಕಿಮ್ಮನೆ ವಿರುದ್ಧ ವಾಗ್ದಾಳಿ ನಡೆಸಿದರು.

ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಗರ್‌ಹುಕುಂ ಕಾನೂನು ಜಾರಿಗೆ ತಂದರು. ಆದರೆ, ಈಗಲೂ ಜನರಿಗೆ ಭೂಮಿ ದೊರಕಿಸಲು ಸಾಧ್ಯವಾಗಿಲ್ಲ. 10,231 ಅರ್ಜಿಗಳಲ್ಲಿ 792 ಮಾತ್ರ ಸಿಂಧುವಾಗಿವೆ. 9,700 ತಿರಸ್ಕೃತವಾಗಿವೆ. ಅರ್ಜಿ ನಮೂನೆ 53ರಲ್ಲಿ ಸಲ್ಲಿಕೆಯಾದ
15249 ಅರ್ಜಿಗಳಲ್ಲಿ 2,620 ಮಾತ್ರ ಮಂಜೂರಾಗಿವೆ. ಅಕ್ರಮ ಸಕ್ರಮ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ 17,719 ಅರ್ಜಿಗಳಲ್ಲಿ ಕೇವಲ 203 ಮಂಜೂರಾಗಿ, 13,042 ವಜಾ ಆಗಿವೆ.

ತೀರ್ಥಹಳ್ಳಿ ಪಟ್ಟಣದ 872 ಅರ್ಜಿಗಳಲ್ಲಿ 532 ವಜಾ ಆಗಿ, 13 ಮಂಜೂರಾಗಿದೆ. ಇದು ಕಿಮ್ಮನೆ ಸಾಧನೆ. ಶಾಸಕರಾಗಿ ಅವರು ರೈತರಿಗೆ, ಕೃಷಿ ಕುಟುಂಬಗಳಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

‘ಡಿಸಿಸಿ ಬ್ಯಾಂಕ್‌ ಹಗರಣದ ಆರೋಪದಿಂದ ಈಗಾಗಲೇ ಮುಕ್ತನಾಗಿದ್ದೇನೆ. ಆದರೂ ತಮ್ಮನ್ನು ಭ್ರಷ್ಟಾಚಾರಿ ಎಂಬಂತೆ ಬಿಂಬಿಸಲಾಗುತ್ತಿದೆ. ಕೆಲವರು ತಮ್ಮ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಯಾವ ಆರೋಪಗಳೂ ಸಾಬೀತಾಗದ ಕಾರಣ ಅತಾಶರಾಗಿದ್ದಾರೆ’ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನ್, ತ್ಯಾಗರಾಜ್, ಜಗದೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದುರ್ಗಪ್ಪಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT