ತಿಲಕವಾಡಿಯ ಗವಳಿ ಗಲ್ಲಿಯಲ್ಲಿ ವಾರದ ಅಂತರದಲ್ಲೇ 12 ಎಮ್ಮೆಗಳು ಸಾವಿಗೀಡಾದ ಬಗ್ಗೆ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಸಚಿವರ ಗಮನಕ್ಕೆ ತಂದಿದ್ದರು. ನಷ್ಟ ಅನುಭವಿಸಿದ ಹೈನುಗಾರರಿಗೆ ಸರ್ಕಾರದಿಂದ ಪರಿಹಾರ ಒದಗಿಸುವಂತೆ ಕೋರಿದ್ದರು. ಇದನ್ನು ಶಾಸಕರು ಸೆಲ್ಫಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಸಚಿವರನ್ನೂ ಮಾತನಾಡಿಸಿ ಆ ವಿಡಿಯೊ ಕೂಡ ಹಾಕಿದ್ದಾರೆ.