<p><strong>ಬೆಳಗಾವಿ:</strong> ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ರಸಗೊಬ್ಬರ ಆಮದು ಸ್ಥಗಿತಗೊಂಡಿದೆ. ರಾಜ್ಯಕ್ಕೆ ಮುಂಗಾರು ಹಂಗಾಮಿಗೆ 18.64 ಲಕ್ಷ ಮೆಟ್ರಿಕ್ ಟನ್ ಕೊರತೆ ಕಾಡುತ್ತಿದೆ. ಬಿತ್ತನೆ ಹೊಲ ಹದ ಮಾಡಿರುವ ರೈತರು ಬೀಜ– ಗೊಬ್ಬರಕ್ಕಾಗಿ ಕಾಯಬೇಕಾದ ಸ್ಥಿತಿಯಿದೆ.</p>.<p>ಈ ವರ್ಷ 30.05 ಲಕ್ಷ ಟನ್ ರಸಗೊಬ್ಬರಕ್ಕೆ ರೈತರಿಂದ ಬೇಡಿಕೆ ವ್ಯಕ್ತವಾಗಿದೆ. ಮೇ 29ರವರೆಗೆ 11.41 ಲಕ್ಷ ಟನ್ ಮಾತ್ರ ಸಂಗ್ರಹವಾಗಿದೆ. ಇದರಲ್ಲಿ ಯೂರಿಯಾ, ಡಿಎಪಿ, ಕಾಂಪ್ಲೆಕ್ಟ್, ಪೊಟ್ಯಾಷ್, ಸೂಪರ್ ಪಾಸ್ಫೆಟ್ ಹಾಗೂ ಇತರೆ ಗೊಬ್ಬರಗಳೂ ಸೇರಿವೆ.</p>.<p>ಕೆಲ ವರ್ಷಗಳಿಂದ ಚೀನಾ ರಫ್ತು ವಹಿವಾಟು ನಿಲ್ಲಿಸಿದೆ. ಮಧ್ಯಪ್ರಾಚ್ಯ ದೇಶಗಳಾದ ಒಮನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಜೋರ್ಡಾನ್, ಇಸ್ರೇಲ್ ದೇಶಗಳನ್ನೇ ರಾಜ್ಯ ರಸಗೊಬ್ಬರಕ್ಕಾಗಿ ಅವಲಂಬಿಸಿದೆ. ಅಲ್ಲಿ ಯುದ್ಧದ ಕರಿನೆರಳಿನಿಂದ ಇಲ್ಲಿ ಸಮಸ್ಯೆಯಾಗಿದೆ.</p>.<p>ಕೊರತೆ ನೀಗಿಸಲು ಹರಸಾಹಸ: ರಸಗೊಬ್ಬರ ಬಳಕೆ ಪ್ರಮಾಣ ಕಡಿಮೆ ಮಾಡಿ; ಭೂಮಿಯ ಫಲವತ್ತತೆ ಕಾಪಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಅದಕ್ಕೆ ಪರ್ಯಾಯ ಮಾರ್ಗಗಳನ್ನೂ ಕೇಂದ್ರ ಸರ್ಕಾರ ಸೂಚಿಸಿದೆ.</p>.<p>ರಸಗೊಬ್ಬರ ಕೊರತೆ ನೀಗಿಸಲು ಸಾವಯವ ಗೊಬ್ಬರ ಬಳಕೆ ಹೆಚ್ಚಳ, ತಯಾರಿಕೆಗೆ ಪ್ರೋತ್ಸಾಹ, ರಫೇಲ್, ಜೈವಿಕ ಗೊಬ್ಬರ ಬಳಕೆಗೆ ಮಾರ್ಗದರ್ಶನ ಮಾಡುತ್ತಿದ್ದೇವೆ. ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿಎಪಿ ಬಗ್ಗೆ ರಾಜ್ಯದೆಲ್ಲೆಡೆ ಅರಿವು ಮೂಡಿಸಲಾಗುತ್ತಿದೆ’ ಎಂದು ರಸಗೊಬ್ಬರ ಉಗ್ರಾಣ ಹಾಗೂ ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ರೈತರಿಗೆ ಮುಂಚಿತವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವ ಹಂಬಲ ಇರುತ್ತದೆ. ಒಂದು ಚೀಲ ಅಗತ್ಯ ಇದ್ದಲ್ಲಿ ನಾಲ್ಕು ಚೀಲ ಸಂಗ್ರಹಿಸುತ್ತಾರೆ. ಈ ಬಾರಿ ಪ್ರತಿ ಎಕರೆಗೆ ಅಗತ್ಯವಿದ್ದಷ್ಟೇ ವಿತರಣೆ ಆಗಲಿದೆ. ಕೃಷಿ ಪತ್ತಿನ ಸಹಕಾರ ಸಂಘಗಳು, ಕೃಷಿ ಸಖಿ ತಂಡಗಳು, ಗ್ರಾಮ ಪಂಚಾಯಿತಿಗಳ ಮೂಲಕ ರಸಗೊಬ್ಬರ ಮಿತ ಬಳಕೆಗೆ ಕೃಷಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕಾಳಸಂತೆಯಲ್ಲಿ ಮಾರಾಟ ನಿಯಂತ್ರಿಸಲು ಕ್ರಮವಹಿಸಲಾಗಿದೆ’ ಎಂದು ವಿವರಿಸಿದರು.</p>.<h2>ಎಲ್ಲಿ ಹೆಚ್ಚು ಬೇಡಿಕೆ? </h2><p>ರಾಜ್ಯದಲ್ಲಿ ಅತಿ ಹೆಚ್ಚು ಬೆಳಗಾವಿ ಜಿಲ್ಲೆಯಲ್ಲಿದೆ. ಮುಂಗಾರು ಹಂಗಾಮಿಗಾಗಿ 1.28 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಬಂದಿದ್ದು 35781 ಮೆಟ್ರಿಕ್ ಟನ್ ಮಾತ್ರ ಸಂಗ್ರಹವಿದೆ. ಎರಡನೇ ಸ್ಥಾನದಲ್ಲಿ ಇರುವ ರಾಯಚೂರು ಜಿಲ್ಲೆಯಲ್ಲಿ 74705 ಮೆಟ್ರಿಕ್ ಟನ್ಗೆ ಬೇಡಿಕೆ ಇದೆ. 48438 ಮೆಟ್ರಿಕ್ ಟನ್ ಸಂಗ್ರಹವಿದೆ.</p>.<div><blockquote>ರಸಗೊಬ್ಬರ ಕೊರತೆ ನೀಗಿಸಲು ಪರ್ಯಾಯ ಉಪಾಯ ಮಾಡಿಕೊಳ್ಳಲಾಗಿದೆ. ವೈಜ್ಞಾನಿಕ ಬಳಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. </blockquote><span class="attribution">-ಎಚ್.ಡಿ.ಕೋಳೇಕರ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ</span></div>.<div><blockquote>ಯೂರಿಯಾ ಡಿಎಪಿಗೆ ಬೇಡಿಕೆ ಸಲ್ಲಿಸಿದ್ದೇನೆ. ಈ ಹೊತ್ತಿಗೆ ಬೀಜ ಗೊಬ್ಬರ ಹಂಚಬೇಕಿತ್ತು. ಇನ್ನೊಂದು ವಾರದಲ್ಲಿ ಬಿತ್ತಬೇಕಿದೆ. ದಿಕ್ಕೇ ತೋಚುತ್ತಿಲ್ಲ </blockquote><span class="attribution">-ಬಸವರಾಜ ಸುಬೇದಾರ, ರೈತ ತುರುಕರ ಶೀಗಿಹಳ್ಳಿ ಬೆಳಗಾವಿ ಜಿಲ್ಲೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ರಸಗೊಬ್ಬರ ಆಮದು ಸ್ಥಗಿತಗೊಂಡಿದೆ. ರಾಜ್ಯಕ್ಕೆ ಮುಂಗಾರು ಹಂಗಾಮಿಗೆ 18.64 ಲಕ್ಷ ಮೆಟ್ರಿಕ್ ಟನ್ ಕೊರತೆ ಕಾಡುತ್ತಿದೆ. ಬಿತ್ತನೆ ಹೊಲ ಹದ ಮಾಡಿರುವ ರೈತರು ಬೀಜ– ಗೊಬ್ಬರಕ್ಕಾಗಿ ಕಾಯಬೇಕಾದ ಸ್ಥಿತಿಯಿದೆ.</p>.<p>ಈ ವರ್ಷ 30.05 ಲಕ್ಷ ಟನ್ ರಸಗೊಬ್ಬರಕ್ಕೆ ರೈತರಿಂದ ಬೇಡಿಕೆ ವ್ಯಕ್ತವಾಗಿದೆ. ಮೇ 29ರವರೆಗೆ 11.41 ಲಕ್ಷ ಟನ್ ಮಾತ್ರ ಸಂಗ್ರಹವಾಗಿದೆ. ಇದರಲ್ಲಿ ಯೂರಿಯಾ, ಡಿಎಪಿ, ಕಾಂಪ್ಲೆಕ್ಟ್, ಪೊಟ್ಯಾಷ್, ಸೂಪರ್ ಪಾಸ್ಫೆಟ್ ಹಾಗೂ ಇತರೆ ಗೊಬ್ಬರಗಳೂ ಸೇರಿವೆ.</p>.<p>ಕೆಲ ವರ್ಷಗಳಿಂದ ಚೀನಾ ರಫ್ತು ವಹಿವಾಟು ನಿಲ್ಲಿಸಿದೆ. ಮಧ್ಯಪ್ರಾಚ್ಯ ದೇಶಗಳಾದ ಒಮನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಜೋರ್ಡಾನ್, ಇಸ್ರೇಲ್ ದೇಶಗಳನ್ನೇ ರಾಜ್ಯ ರಸಗೊಬ್ಬರಕ್ಕಾಗಿ ಅವಲಂಬಿಸಿದೆ. ಅಲ್ಲಿ ಯುದ್ಧದ ಕರಿನೆರಳಿನಿಂದ ಇಲ್ಲಿ ಸಮಸ್ಯೆಯಾಗಿದೆ.</p>.<p>ಕೊರತೆ ನೀಗಿಸಲು ಹರಸಾಹಸ: ರಸಗೊಬ್ಬರ ಬಳಕೆ ಪ್ರಮಾಣ ಕಡಿಮೆ ಮಾಡಿ; ಭೂಮಿಯ ಫಲವತ್ತತೆ ಕಾಪಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಅದಕ್ಕೆ ಪರ್ಯಾಯ ಮಾರ್ಗಗಳನ್ನೂ ಕೇಂದ್ರ ಸರ್ಕಾರ ಸೂಚಿಸಿದೆ.</p>.<p>ರಸಗೊಬ್ಬರ ಕೊರತೆ ನೀಗಿಸಲು ಸಾವಯವ ಗೊಬ್ಬರ ಬಳಕೆ ಹೆಚ್ಚಳ, ತಯಾರಿಕೆಗೆ ಪ್ರೋತ್ಸಾಹ, ರಫೇಲ್, ಜೈವಿಕ ಗೊಬ್ಬರ ಬಳಕೆಗೆ ಮಾರ್ಗದರ್ಶನ ಮಾಡುತ್ತಿದ್ದೇವೆ. ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿಎಪಿ ಬಗ್ಗೆ ರಾಜ್ಯದೆಲ್ಲೆಡೆ ಅರಿವು ಮೂಡಿಸಲಾಗುತ್ತಿದೆ’ ಎಂದು ರಸಗೊಬ್ಬರ ಉಗ್ರಾಣ ಹಾಗೂ ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ರೈತರಿಗೆ ಮುಂಚಿತವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವ ಹಂಬಲ ಇರುತ್ತದೆ. ಒಂದು ಚೀಲ ಅಗತ್ಯ ಇದ್ದಲ್ಲಿ ನಾಲ್ಕು ಚೀಲ ಸಂಗ್ರಹಿಸುತ್ತಾರೆ. ಈ ಬಾರಿ ಪ್ರತಿ ಎಕರೆಗೆ ಅಗತ್ಯವಿದ್ದಷ್ಟೇ ವಿತರಣೆ ಆಗಲಿದೆ. ಕೃಷಿ ಪತ್ತಿನ ಸಹಕಾರ ಸಂಘಗಳು, ಕೃಷಿ ಸಖಿ ತಂಡಗಳು, ಗ್ರಾಮ ಪಂಚಾಯಿತಿಗಳ ಮೂಲಕ ರಸಗೊಬ್ಬರ ಮಿತ ಬಳಕೆಗೆ ಕೃಷಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕಾಳಸಂತೆಯಲ್ಲಿ ಮಾರಾಟ ನಿಯಂತ್ರಿಸಲು ಕ್ರಮವಹಿಸಲಾಗಿದೆ’ ಎಂದು ವಿವರಿಸಿದರು.</p>.<h2>ಎಲ್ಲಿ ಹೆಚ್ಚು ಬೇಡಿಕೆ? </h2><p>ರಾಜ್ಯದಲ್ಲಿ ಅತಿ ಹೆಚ್ಚು ಬೆಳಗಾವಿ ಜಿಲ್ಲೆಯಲ್ಲಿದೆ. ಮುಂಗಾರು ಹಂಗಾಮಿಗಾಗಿ 1.28 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಬಂದಿದ್ದು 35781 ಮೆಟ್ರಿಕ್ ಟನ್ ಮಾತ್ರ ಸಂಗ್ರಹವಿದೆ. ಎರಡನೇ ಸ್ಥಾನದಲ್ಲಿ ಇರುವ ರಾಯಚೂರು ಜಿಲ್ಲೆಯಲ್ಲಿ 74705 ಮೆಟ್ರಿಕ್ ಟನ್ಗೆ ಬೇಡಿಕೆ ಇದೆ. 48438 ಮೆಟ್ರಿಕ್ ಟನ್ ಸಂಗ್ರಹವಿದೆ.</p>.<div><blockquote>ರಸಗೊಬ್ಬರ ಕೊರತೆ ನೀಗಿಸಲು ಪರ್ಯಾಯ ಉಪಾಯ ಮಾಡಿಕೊಳ್ಳಲಾಗಿದೆ. ವೈಜ್ಞಾನಿಕ ಬಳಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. </blockquote><span class="attribution">-ಎಚ್.ಡಿ.ಕೋಳೇಕರ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ</span></div>.<div><blockquote>ಯೂರಿಯಾ ಡಿಎಪಿಗೆ ಬೇಡಿಕೆ ಸಲ್ಲಿಸಿದ್ದೇನೆ. ಈ ಹೊತ್ತಿಗೆ ಬೀಜ ಗೊಬ್ಬರ ಹಂಚಬೇಕಿತ್ತು. ಇನ್ನೊಂದು ವಾರದಲ್ಲಿ ಬಿತ್ತಬೇಕಿದೆ. ದಿಕ್ಕೇ ತೋಚುತ್ತಿಲ್ಲ </blockquote><span class="attribution">-ಬಸವರಾಜ ಸುಬೇದಾರ, ರೈತ ತುರುಕರ ಶೀಗಿಹಳ್ಳಿ ಬೆಳಗಾವಿ ಜಿಲ್ಲೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>